ಕಣಿವೆ, ಸೆ. ೪: ಅತ್ತೂರು ಅರಣ್ಯದ ಕಡೆಯಿಂದ ಆಹಾರ ಅರಸಿ ಬಂದಿರಬಹುದಾದ ಜಿಂಕೆಯೊAದು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಗುಡ್ಡೆಹೊಸೂರು ಬಳಿಯ ಬೊಳ್ಳೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಗ್ರಾಮದ ಚೆಲುವ ಎಂಬವರಿಗೆ ಸೇರಿದ ಮನೆಯ ಗೇಟನ್ನು ದಾಟುವ ಸಂದರ್ಭ ಜಿಂಕೆಯ ಕೊಂಬುಗಳು ಸಿಲುಕಿಕೊಂಡು ಒದ್ದಾಡಿ ಮೃತಪಟ್ಟಿರುವ ಬಗ್ಗೆ ಅರಣ್ಯಾಧಿಕಾರಿ ರತನ್ ಕುಮಾರ್ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪ್ರಾಣಿ ಚಿಕಿತ್ಸಕ ಡಾ.ಚಿಟ್ಟಿಯಪ್ಪ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ವನ್ಯ ಜೀವಿ ಕಾಯಿದೆಯ ಪ್ರಕಾರ ಮೃತ ಜಿಂಕೆಯ ಕಳೇಬರವನ್ನು ಅತ್ತೂರು ಅರಣ್ಯದೊಳಕ್ಕೆ ಹಾಕಿ ಇತರ ಪ್ರಾಣಿಗಳ ಆಹಾರಕ್ಕೆ ಒದಗಿಸಲಾಯಿತು.