ಗೋಣಿಕೊಪ್ಪಲು, ಸೆ. ೪: ಕಾರ್ಮಿಕರಿಬ್ಬರ ನಡುವಿನ ಕಲಹ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊAಡ ಘಟನೆ ನಡೆದಿದೆ. ಹಾತೂರು ಸಮೀಪದ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿ ಗಣೇಶ್ ಹಾಗೂ ವಿಶ್ವ ಎಂಬವರುಗಳ ನಡುವೆ ಕಲಹ ಏರ್ಪಟ್ಟ ಸಂದರ್ಭ ಆಕ್ರೋಶಗೊಂಡ ಗಣೇಶ್ ವಿಶ್ವನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಗಣೇಶ್ ಕ್ಷÄಲ್ಲಕ ವಿಷಯದಲ್ಲಿ ಕಲಹ ತೆಗೆದಿದ್ದು ನಂತರ ಮಾತಿಗೆ ಮಾತು ಬೆಳೆದು ವಿಶ್ವನನ್ನು ಹತ್ಯೆ ಮಾಡಿದ್ದಾನೆ. ವೀರಾಜಪೇಟೆಯ ಪೊಲೀಸರು ಗಣೇಶ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪಪಡಿಸಿದ್ದಾರೆ.