ಸಿದ್ದಾಪುರ, ಸೆ. ೪: ಗೌರಿ ಗಣೇಶ ಆಚರಣೆಯನ್ನು ಸೌಹಾರ್ದತೆಯಿಂದ ಕಾನೂನಿನ ಚೌಕಟ್ಟಿನಲ್ಲಿ ಆಚರಿಸುವಂತೆ ಮಡಿಕೇರಿ ವಿಭಾಗದ ಸಿ.ಐ. ರಾಜು ಸಲಹೆ ನೀಡಿದ್ದಾರೆ.

ಸಿದ್ದಾಪುರದ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಉತ್ಸವ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗೌರಿ ಗಣೇಶ ಉತ್ಸವದ ಕಾರ್ಯಕ್ರಮದಲ್ಲಿ ಡಿ.ಜೆ. ಬಳಸಲು ಅವಕಾಶ ಇರುವುದಿಲ್ಲವೆಂದು ತಿಳಿಸಿದರು. ಕಳೆದ ವರ್ಷ ಡಿ.ಜೆ. ಬಳಸಿದ ಸಮಿತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಹಾಗೂ ಕಾನೂನಿನಲ್ಲಿ ಡಿಜೆ ಬಳಸಲು ಅವಕಾಶ ಇಲ್ಲದಿರುವ ಕಾರಣ ಯಾರು ಕೂಡ ಡಿಜೆ ಬಳಸಬಾರದೆಂದು ಸಭೆಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗೌರಿ ಗಣೇಶ ಉತ್ಸವ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಿದ್ದಾಪುರ ಠಾಣಾಧಿಕಾರಿಗಳಾದ ರಾಘವೇಂದ್ರ ಹಾಗೂ ಶಿವಣ್ಣ ಹಾಜರಿದ್ದರು