ಸುAಟಿಕೊಪ್ಪ, ಸೆ. ೪: ಕಂಬಿಬಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ ಆರೋಪಿ ಯನ್ನು ಸುಂಟಿಕೊಪ್ಪ ಪೊಲೀ ಸರು ಬಂಧಿಸಿದ್ದಾರೆ.

ಕಳೆದ ೮ ದಿನಗಳ ಹಿಂದೆ ಕಂಬಿಬಾಣೆ ನಿವಾಸಿ ಚಿರಾಗ್ ಎಂಬವರಿಗೆ ಸೇರಿದ ಬೈಕನ್ನು ಯಮಹಾ ಆರ್ ೧೫ (ಕೆಎ೧೨ ಎಕ್ಸ್ ೦೮೬೧) ಬೈಕನ್ನು ಕಳವಾಗಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿ ಸೋಮವಾರಪೇಟೆ ದೊಡ್ಡಮಳ್ತೆ ನಿವಾಸಿ ಚಂದನ್ (೨೯) ಎಂಬಾತನನ್ನು ಬಂಧಿಸಿದ್ದಾರೆ.

ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ ರಾಜೇಶ್ ಕೋಟ್ಯಾನ್ ನೇತೃತ್ವದಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಅಪರಾಧ ವಿಭಾಗದ ಎಸ್‌ಐ ಭಾರತಿ ಅವರ ಮುಂದಾಳತ್ವದಲ್ಲಿ ಹೆಚ್.ಡಿ.ಕೋಟೆಯ ಸರಗೂರುವಿನಲ್ಲಿ ಆರೋಪಿ ಚಂದನ್‌ನನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪ್ರವೀಣ್, ಬಾಬು, ರಂಜಿತ್, ನಿಶಾಂತ್, ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು.