ಮಡಿಕೇರಿ, ಸೆ. ೪: ನಗರದ ಕೊಡಗು ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ಎ.ಜಿ. ಪರ್ಲಿನ್ ಪೊನ್ನಮ್ಮ ದಕ್ಷಿಣ ಭಾರತ ಸಬ್ ಜೂನಿಯರ್ ಮಹಿಳಾ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ದಕ್ಷಿಣ ಭಾರತ ತಂಡಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ಈ ಮೊದಲು ಕರ್ನಾಟಕ ಸಬ್ ಜೂನಿಯರ್ ಮಹಿಳೆಯರ ತಂಡದ ಉಪನಾಯಕಿಯಾಗಿ ಆಯ್ಕೆಯಾಗಿ ಎರಡು ಪಂದ್ಯಗಳಲ್ಲಿ ಉತ್ತಮ ಆಟಗಾರ್ತಿ ಎಂಬ ಬಿರುದುಗಳಿಸಿ ಇದೀಗ ದಕ್ಷಿಣ ಭಾರತ ಸಬ್ ಜೂನಿಯರ್ ಮಹಿಳಾ ತಂಡದ ಚುಕ್ಕಾಣಿ ಹಿಡಿದಿದ್ದಾಳೆ.

ಪರ್ಲಿನ್ ಪೊನ್ನಮ್ಮ ಸೆಪ್ಟೆಂಬರ್ ೭ರವರೆಗೆ ಹರಿಯಾಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿಭಾಗ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದಾಳೆ ಎಂದು ಕೊಡಗು ವಿದ್ಯಾಲಯದ ಪ್ರಕಟಣೆ ತಿಳಿಸಿದೆ. ಈಕೆ ಮಡಿಕೇರಿಯ ವಕೀಲ ಅಚ್ಚಪಂಡ ಗಿರಿ ಉತ್ತಪ್ಪ ಹಾಗೂ ಪದ್ಮ ದಂಪತಿಯ ಪುತ್ರಿ.