ಸಿದ್ದಾಪುರ, ಸೆ. ೫: ನೆಲ್ಲಿಹುದಿಕೇರಿ ಹಾಗೂ ಸಿದ್ದಾಪುರ ಆಟೋ ಚಾಲಕರನ್ನು ಒಳಗೊಂಡ ಕಾವೇರಿ ಆಟೋ ಚಾಲಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಸ್. ಹುಸೈನ್ ಆಯ್ಕೆಯಾಗಿದ್ದಾರೆ.

ನೆಲ್ಲಿಹುದಿಕೇರಿ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕದಿರು ಬೆಳ್ಳಿಯಪ್ಪ, ವಿನೋದ್, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್, ಖಜಾಂಚಿಯಾಗಿ ರಶಾಧ್ ಹಾಗೂ ೨೫ ಮಂದಿಯನ್ನು ಸಮಿತಿಗೆ ಆಯ್ಕೆ ಮಾಡಿಕೊಳ್ಳಲಾಯಿತು.