ನಿರ್ದೇಶನದ "ಇಬ್ಬನಿ ತಬ್ಬಿದ ಇಳೆಯಲಿ" ತೆರೆಗೆ

ಮಡಿಕೇರಿ ಸೆ. ೫: ಖ್ಯಾತ ನಿರ್ದೇಶಕ, ನಟ ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿರುವ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರ ರಾಜ್ಯಾದ್ಯಂತ ಇಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.

ಮಡಿಕೇರಿ ನಿವಾಸಿ, ನಿವೃತ್ತ ಸುಬೇದಾರ್ ಮೇಜರ್ ಪೂಜಾರೀರ ಬೆಳ್ಯಪ್ಪ ಹಾಗೂ ವೇದಾವತಿ ದಂಪತಿಯ ಪುತ್ರ ಪೂಜಾರೀರ ಬಿ.ಚಂದ್ರಜಿತ್ ಈ ಚಿತ್ರವನ್ನು ನಿರ್ದೇಶಿಸಿರುವುದು ವಿಶೇಷ. ಚಿತ್ರದ ಕಥೆ ಮತ್ತು ಹಾಡುಗಳನ್ನು ಇವರೇ ಬರೆದಿದ್ದಾರೆ.

"ಬ್ಲಾಗ್ ಬರವಣಿಗೆಯ ಕಾಲದಲ್ಲಿ ಒಂಬತ್ತು ವರ್ಷಗಳ ಹಿಂದೆ ಚಂದ್ರಜಿತ್ ನೀಡಿದ್ದ ಲಿಂಕ್ ಇಂದು ಸಿನಿಮಾವಾಗಿದೆ. ಆ ಬರಹ ತುಂಬಾ ವಿಶೇಷವಾಗಿತ್ತು. ಈ ರೀತಿಯ ಕಥೆ ಇರುವ ಸಿನಿಮಾ ಈ ಹಿಂದೆ ಬಂದಿರಬಹುದು. ಆದರೆ, ಇಂತಹ ನಿರೂಪಣೆಯ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಬಂದಿಲ್ಲ ಎಂದು ರಕ್ಷಿತ್ ಶೆಟ್ಟಿ ಅವರು ಪೂಜಾರೀರ ಚಂದ್ರಜಿತ್ ಅವರ ನಿರ್ದೇಶನದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.