ಮುಳ್ಳೂರು, ಸೆ. ೫: ಗಣೇಶ ಚತುರ್ಥಿ ಪ್ರಯುಕ್ತ ಸಮೀಪದ ನಿಡ್ತ ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣಪತಿ ತಯಾರಿಸಿ ಸಂಭ್ರಮಪಟ್ಟರು. ಶಾಲೆಯ ನಿಸರ್ಗ ಇಕೋ ಕ್ಲಬ್ ವತಿಯಿಂದ ಡಿ.ಎಸ್. ಮಧುಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮಾಲಿನ್ಯ ರಹಿತ, ಪಿಒಪಿ ಮುಕ್ತ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ತಯಾರಿಸಿದರು. ವಿದ್ಯಾರ್ಥಿಗಳು ತಾವೆ ತಯಾರಿಸಿದ ವಿವಿಧ ಪ್ರಕಾರಗಳ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಅಲಂಕರಿಸಿ ಸಂಭ್ರಮಿಸಿದರು.

ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಎಂ.ಸಿ. ನಳಿನಿ, ಹಿರಿಯ ಶಿಕ್ಷಕ ಮಾರುತಿ ಅರೇರ್, ಎಂ.ವಿ.ರೂಪ, ಮಹಾದೇವಿ, ಪ್ರಿಯಾಂಕ ಚಿಪಳೂಣಕರ್, ಗೀತಾ, ಡಿ.ಸಿ. ಕುಶಾಲಪ್ಪ ಹಾಜರಿದ್ದರು.