ಮಡಿಕೇರಿ, ಸೆ. ೬ : ನಗರದ ಕೊಡಗು ವಿದ್ಯಾಲಯದಲ್ಲಿ ೯ನೇ ತರಗತಿ ಓದುತ್ತಿರುವ ಎನ್‌ಸಿಸಿ ಕೆಡೆಟ್ ಸಾರ್ಜೆಂಟ್ ಜ್ಯೋತಿರಾದಿತ್ಯ ಬಿ. ವೈ. ಕರ್ನಾಟಕ ಗೋವಾ ಡೈರೆಕ್ಟರೇಟ್‌ನ ಜೂನಿಯರ್ ವಿಭಾಗದ ಗ್ರೂಪಿಂಗ್ ಫೈಯರಿಂಗ್‌ನಲ್ಲಿ ಆಯ್ಕೆಯಾಗಿರುವ ಮೂರು ಕೆಡೆಟ್‌ಗಳ ಪೈಕಿ ಮೊದಲನೇ ಸ್ಥಾನೀಯಾಗಿ ದೆಹಲಿಯಲ್ಲಿ ಮೂರರಿಂದ ೧೩ ರವರೆಗೆ ನಡೆಯಲಿರುವ ಅಖಿಲ ಭಾರತ ತಲ್ ಸೈನಿಕ ಕ್ಯಾಂಪ್‌ಗೆ ಆಯ್ಕೆಯಾಗಿದ್ದಾರೆ.

ಈತ ೧೯ನೇ ಕರ್ನಾಟಕ ಬೆಟಾಲಿಯನ್ ಕೆಡೆಟ್ ಆಗಿದ್ದು ಮರಗೋಡಿನ ಕೃಷಿಕ ಬಾಳೆಕಜೆ ಯೋಗೇಂದ್ರ ಮತ್ತು ಸಂಧ್ಯಾ ದಂಪತಿ ಪುತ್ರ.