ಕೂಡಿಗೆ, ಸೆ. ೬ : ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ವತಿಯಿಂದ ರಾಷ್ಟಿçÃಯ ಕ್ರೀಡಾ ದಿನಾಚರಣೆಯನ್ನು ಆಚರಿಸ ಲಾಯಿತು.

ಕಾರ್ಯಕ್ರಮ ಉದ್ಘಾಟನೆ ಯನ್ನು ಶಾಲೆಯ ಹಿಂದಿ ಭಾಷಾ ಶಿಕ್ಷಕ ಪ್ರಮೋದ್ ನಾರ್ಥನ್ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರು.

ರಾಷ್ಟಿçÃಯ ಕ್ರೀಡಾ ದಿನಾಚರಣೆ ಬಗ್ಗೆ ಹಾಕಿ ತರಬೇತುದಾರ ಬಿ.ಎಸ್. ವೆಂಕಟೇಶ್ ಮಾಹಿತಿಯಿತ್ತರು. ಈ ಸಂದರ್ಭ ಹಾಕಿ ತರಬೇತುದಾರರಾದ ದೀನಾಮಣಿ, ಬಿ.ಜೆ. ಮಂಜುನಾಥ, ಸುರೇಶ್, ಶಾಲಾ ಶಿಕ್ಷಕರಾದ ಮುರುಳಿ, ರಂಜನಿ ಆಶ್ವಿಮಿತಾ ವಾರ್ಡ್ನ ಕವಿತ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.