ಸೋಮವಾರಪೇಟೆ, ಸೆ. ೬: ಕೂಡಿಗೆ ಕ್ರೀಡಾ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಸಿ. ಧನುಷ್, ದಕ್ಷಿಣ ಭಾರತ ಸಬ್ ಜೂನಿಯರ್ ಪುರುಷ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ದಕ್ಷಿಣ ಭಾರತ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾನೆ.

ಈ ಮೊದಲು ಕರ್ನಾಟಕ ಸಬ್ ಜೂನಿಯರ್ ಪುರುಷ ತಂಡಕ್ಕೆ vಆಯ್ಕೆಯಾಗಿ ಕೇರಳದ ಕೊಲ್ಲಂನಲ್ಲಿ ನಡೆದ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದನು. ಪ್ರಸ್ತುತ ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿಭಾಗದ

(ಮೊದಲ ಪುಟದಿಂದ) ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಂಡಿದ್ದಾನೆ.

ಈತ ಸೋಮವಾರಪೇಟೆ ಗಾಂಧಿನಗರದ ಗುತ್ತಿಗೆದಾರ ಹೆಚ್.ಜಿ. ಚಿಂತು ಹಾಗೂ ಕೆ.ಎಸ್. ಕವಿತ ದಂಪತಿ ಪುತ್ರನಾಗಿದ್ದು, ಕೂಡಿಗೆ ಕ್ರೀಡಾ ಶಾಲೆಯ ತರಬೇತುದಾರ ವೆಂಕಟೇಶ್ ಅವರು ತರಬೇತಿ ನೀಡುತ್ತಿದ್ದಾರೆ.