ವೀರಾಜಪೇಟೆ, ಸೆ. ೬ : ವಿಶ್ವ ಛಾಯಾಚಿತ್ರ ದಿನಾಚರಣೆ ಅಂಗವಾಗಿ ವೀರಾಜಪೇಟೆ ಹೊರ ವಲಯದ ಕೆದಮುಳ್ಳೂರು ಗ್ರಾಮದ ಕ್ಯಾಟರಿನ ಚಿತ್ತದಿನಿ ಮಕ್ಕಳಿಗೆ ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡುವ ಮೂಲಕ ವಿಶ್ವ ಛಾಯಾಚಿತ್ರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಛಾಯಾಚಿತ್ರ ಸಂಘದ ಅಧÀ್ಯಕ್ಷ ಡಿ.ಸಿ. ರವೀಂದ್ರ ಅವರ ನೇತೃತ್ವದಲ್ಲಿ ನಡೆಯಿತು, ಸಂಘದ ಸದಸ್ಯರ ನೆರವಿನಿಂದ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಂಸ್ಥೆಯ ಶಿಕ್ಷಕರಾದ ಸಿಸ್ಟರ್ ಟ್ರೀಜ, ಸೌಜನ್ಯ, ಲೂಸಿ ಹಾಜರಿದ್ದರು. ಸಂಘದ ಕಾರ್ಯದರ್ಶಿ ರಾಮದಾಸ್, ನಿರ್ದೇಶಕ ನಾಸಿರ್ ಮಾತನಾಡಿದರು. ದಕ್ಷಿಣ ಕೊಡಗು ಸಂಘದ ಆಡಳಿತ ಮಂಡಳಿಯ ಸದಸ್ಯರು ಆಗಮಿಸಿ ಮಕ್ಕಳಿಗೆ ಶುಭಾಶಯ ಸಲ್ಲಿಸಿದರು. ಸಂಸ್ಥೆಯ ಸಿಸ್ಟರ್ ಟ್ರೀಜ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು