ಮಡಿಕೇರಿ, ಸೆ. ೬: ನಾಯಿಮರಿಗಳ ಮೇಲೆ ಕಿಡಿಗೇಡಿಗಳು ಕಲ್ಲು ಎತ್ತಿ ಹಾಕಿ ಕೊಂದಿರುವ ಘಟನೆ ನಗರದ ದೇಚೂರಿನಲ್ಲಿ ನಡೆದಿದೆ.

ಸುಮಾರು ಒಂದೂವರೆ ತಿಂಗಳ ಹಿಂದೆ ಬೀದಿನಾಯಿಗೆ ೬ ಮರಿಗಳು ಜನಿಸಿದ್ದು, ಅವುಗಳು ದೇಚೂರಿನ ಹೇಮಕುಮಾರ್ ಎಂಬವರ ಮನೆ ಬಳಿ ಬಂದಿದ್ದವು. ಬೀದಿ ನಾಯಿ ಸೇರಿದಂತೆ ೬ ಮರಿಗಳು ಮನೆಯ ಶೆಡ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದವು.

ನಾಯಿಮರಿಗಳನ್ನು ಕೊಂದ ಕಿಡಿಗೇಡಿಗಳು

(ಮೊದಲ ಪುಟದಿಂದ) ಮನೆಯವರು ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ನಾಯಿಗಳಿಗೆ ಆಹಾರ ಹಾಕುತ್ತಿದ್ದರು.

ಕಳೆದ ರಾತ್ರಿ ಕಿಡಿಗೇಡಿಗಳು ಶೆಡ್‌ಗೆ ಪ್ರವೇಶಿಸಿ ೨ ನಾಯಿಮರಿಗಳ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಪರಿಣಾಮ ಮರಿಗಳು ಸಾವನ್ನಪ್ಪಿವೆ. ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ ಕಲ್ಲು ಪತ್ತೆಯಾಗಿದೆ. ಘಟನೆ ಹಿನ್ನೆಲೆ ಪೊಲೀಸರಿಗೆ ಮನೆಯವರು ವಿಷಯ ತಿಳಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಕಿಡಿಗೇಡಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.