ಕುಶಾಲನಗರ, ಸೆ. ೬: ಕುಶಾಲನಗರ ಗಣಪತಿ ದೇವಾಲಯಕ್ಕೆ ಸಿದ್ಧಿ ಗಣಪತಿ ಅವತಾರದ ಬೆಳ್ಳಿ ಹೊದಿಕೆಯನ್ನು ದಾನಿಗಳು ಸಮರ್ಪಣೆ ಮಾಡಿದರು.

ಕುಶಾಲನಗರದ ವೈದ್ಯ ಡಾ. ಗೋವಿಂದ ಭಟ್ ಮತ್ತು ಕುಟುಂಬಸ್ಥರು ಬೆಳ್ಳಿಯ ಅವತಾರವನ್ನು ದೇವಾಲಯದ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು.

ಈ ಸಂಬAಧ ದೇವಾಲಯದಲ್ಲಿ ವಿಶೇಷ ಹೋಮ ಹವನಾದಿ ಕಾರ್ಯಕ್ರಮಗಳು ಜರುಗಿದವು.

ದೇವಾಲಯ ಸಮಿತಿಯ ಅಧ್ಯಕ್ಷರಾದ ಎಂ.ಕೆ. ದಿನೇಶ್, ಪ್ರಧಾನ ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ಖಜಾಂಚಿ ಎಸ್.ಕೆ. ಸತೀಶ್, ಸಹ ಕಾರ್ಯದರ್ಶಿ ಕೆ.ಎನ್. ದೇವರಾಜ್ ನಿರ್ದೇಶಕ ಪುಂಡರಿಕಾಕ್ಷ ಮತ್ತು ಪ್ರಧಾನ ಅರ್ಚಕ ಆರ್.ಕೆ ನಾಗೇಂದ್ರ ಬಾಬು ಮತ್ತು ಅರ್ಚಕರುಗಳು ದಾನಿಗಳ ಕುಟುಂಬ ಸದಸ್ಯರು ಇದ್ದರು.