ವೀರಾಜಪೇಟೆ, ಸೆ. ೬: ವೀರಾಜಪೇಟೆಯ ಮೂರ್ನಾಡು ರಸ್ತೆಯಲ್ಲಿರುವ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ತಾ. ೯ ರಂದು ಬೆಳಿಗ್ಗೆ ೯:೩೦ಕ್ಕೆ ತಾಲೂಕು ಮಟ್ಟದ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸಬ್ ಜೂನಿಯರ್ ವಯೋಮಿತಿ ೬ ರಿಂದ ೧೧, ಜೂನಿಯರ್ ವಯೋಮಿತಿ ೧೨ ರಿಂದ ೧೬, ಸೀನಿಯರ್ ೧೭ ರಿಂದ ೨೩, ಸಾರ್ವಜನಿಕ ವಿಭಾಗ ವಯೋಮಿತಿಯಲ್ಲಿ ೨೩ ರಿಂದ ಮೇಲ್ಪಟ್ಟವರು ಭಾಗವಹಿಸಬಹುದು.

ಭಾಗವಹಿಸುವ ಸ್ಪರ್ಧಾರ್ಥಿಗಳು ೯೦೦೮೬೧೩೭೨೯ (ವಿಮಲಾ ದಶರಥ್) ಅವರ ವಾಟ್ಸಾö್ಯಪ್ ನಂಬರ್‌ಗೆ ತಮ್ಮ ಹೆಸರನ್ನು ನೀಡಿ ನೊಂದಾಯಿಸಿಕೊಳ್ಳಲು ಕೋರಿದೆ.