ಗೋಣಿಕೊಪ್ಪ ವರದಿ, ಅ. ೯: ಮುಳಿಯ ಜ್ಯುವೆಲ್ಸ್ನಲ್ಲಿ ಚಿನ್ನೋತ್ಸವಕ್ಕೆ ಚಾಲನೆ ನೀಡಲಾಯಿತು. ಶಾಖಾ ವ್ಯವಸ್ಥಾಪಕ ಬಿ.ಎಸ್. ಕಿಶೋರ್ ಮಾತನಾಡಿ, ಒಂದು ತಿಂಗಳು ಚಿನ್ನೋತ್ಸವ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿದೆ. ಡೈಮಂಡ್ ಖರೀದಿಸುವವರಿಗೆ ವಿಶೇಷ ಕೊಡುಗೆಯಾಗಿ ಐದು ಕಾರುಗಳನ್ನು ಅದೃಷ್ಠಶಾಲಿಗಳಿಗೆ ನೀಡಲಾಗುತ್ತಿದೆ ಎಂದರು. ಉದ್ಯಮಿ ಆದೇಂಗಡ ತನುಜಾ ಉತ್ತಪ್ಪ ಮಾತನಾಡಿ, ಆಭರಣ ಖರೀದಿಸಿ ವ್ಯವಹಾರಕ್ಕೆ ಬಳಸಿಕೊಳ್ಳುವುದನ್ನು ಕರಗತ ಮಾಡಿಕೊಳ್ಳುವುದರಿಂದ ಹೆಚ್ಚು ಪ್ರಯೋಜನವಾಗುತ್ತಿದೆ. ಗ್ರಾಹಕರೊಂದಿಗೆ ಉತ್ತಮ ವ್ಯವಹಾರ ನಂಬಿಕೆಗೆ ಹೆಸರುವಾಸಿಯಾಗಲು ಸಾಧ್ಯವಾಗಲಿದೆ ಎಂದರು.

ಗೋಣಿಕೊಪ್ಪ ಯೂನಿಯನ್ ಬ್ಯಾಂಕ್ ಪ್ರಬಂಧಕಿ ಸ್ವರೂಪ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಶುಭ ಕೋರಿದರು.