ಶನಿವಾರಸಂತೆ, ಅ. ೯: ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಶನಿವಾರ ಶರನ್ನವರಾತ್ರಿಯ ತೃತೀಯ ದಿನ ನವದುರ್ಗೆಯರ ತೃತೀಯ ಸ್ವರೂಪ ಶ್ರೀಚಂದ್ರಘAಟಾ ದೇವಿಯ ಆರಾಧನೆ ಹಾಗೂ ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.

ನಿವೃತ್ತ ಸೈನಿಕ ನಿಂಗರಾಜ್-ಶಿಕ್ಷಕಿ ವನಜಾಕ್ಷಿ ದಂಪತಿ ಹಾಗೂ ಮಕ್ಕಳ ಸೇವಾರ್ಥದೊಂದಿಗೆ ಭಕ್ತಾದಿಗಳು ದೇವಿ ಮತ್ತು ಗುಳಿಗ ದೈವಕ್ಕೆ ಎಳನೀರು, ಹೂ, ಹಣ್ಣುಕಾಯಿ, ಮಡಿಲಕ್ಕಿ, ನೈವೇದ್ಯ ಸಮರ್ಪಿಸಿ, ನಿಂಬೆಹಣ್ಣಿನ ದೀಪದಾರತಿ ಬೆಳಗಿದರು. ಅರ್ಚಕ ಪ್ರಕಾಶ್ಚಂದ್ರ ಸುವರ್ಣ ಪೂಜಾ ವಿಧಿ ನೆರವೇರಿಸಿದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ನಡೆದು ಪೂಜಾ ಕಾರ್ಯ ಸಂಪನ್ನವಾಯಿತು.