ಮಡಿಕೇರಿ, ಅ. ೧೦: ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ಕಾವೇರಿ ದಸರಾ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ತಾ. ೧೧ ರಂದು (ಇಂದು) ಬಹುಭಾಷಾ ಕವಿಗೋಷ್ಠಿ ಮತ್ತು ಲೇಖನ ಸೌರಭ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಕವಿಗೋಷ್ಠಿ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ನಾಗೇಶ್ ಕಾಲೂರು ವಹಿಸಲಿದ್ದು, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಉದ್ಘಾಟಿಸಲಿದ್ದಾರೆ. ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕನ್ನಡ, ಕೊಡವ, ಅರೆಭಾಷೆ, ಇಂಗ್ಲೀಷ್, ಹಿಂದಿ, ಕುಂಬಾರ, ಮರಾಠಿ, ಬ್ಯಾರಿ, ಹಿಂದಿ, ತಮಿಳು, ಮಲೆಯಾಳಂ, ಕೊಂಕಣಿ, ಹವ್ಯಕ ಭಾಷೆಯಲ್ಲಿ ಒಟ್ಟು ೯೨ ಕವಿಗಳು ಕವನ ವಾಚಿಸಲಿದ್ದಾರೆ.