ಗೋಣಿಕೊಪ್ಪಲು, ಅ.೧೦: ಕಾವೇರಿ ಕಲಾವೇದಿಕೆಯಲ್ಲಿ ದಸರಾ ಅಂಗವಾಗಿ ಬುಧವಾರ ಸೈಕ್ಲೋನ್ ನೃತ್ಯ ಶಾಲೆಯ ರಮೇಶ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ರಿಫ್ಲೆಕ್ಷನ್ ಡಾನ್ಸ್ ತಂಡದ ಅವಿನಾಶ್ ವಿದ್ಯಾರ್ಥಿಗಳು ದೇಶಭಕ್ತಿ, ಭಕ್ತಿ ಗೀತೆ, ಸೇರಿದಂತೆ ಹಲವು ಪ್ರಕಾರಗಳ ನೃತ್ಯ ಕಾರ್ಯಕ್ರಮ ನಡೆಯಿತು.

ಸುಮಾರು ೩ ಗಂಟೆಗಳ ಕಾಲ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ವೇದಿಕೆ ಹತ್ತಿದ ಪುಟಾಣಿಗಳು, ೪೫ ವಯಸ್ಸಿನ ಮಹಿಳೆಯರು ನೃತ್ಯ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಗೋಣಿಕೊಪ್ಪಲುವಿನ ಚಿಗುರು ತಂಡ ಪೊನ್ನಂಪೇಟೆ ನಾಟ್ಯ ಸಂಕಲ್ಪ ಶಾಲೆಯಿಂದ ನೃತ್ಯ, ಭರತ ನಾಟ್ಯಗಳು ಕಲಾ ಪ್ರೇಕ್ಷಕರನ್ನು ರಂಜಿಸಿತು.