ಮಡಿಕೇರಿ, ಅ. ೧೦: ತಾ. ೧೧ ರಂದು (ಇಂದು) ಮಡಿಕೇರಿ ದಸರಾ ಜನೋತ್ಸವದ ಆಯುಧ ಪೂಜೆ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೇಕ್ಷಕರು ಸೇರುವ ನಿರೀಕ್ಷೆ ಹಿನ್ನೆಲೆ ಗಾಂಧಿ ಮೈದಾನ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಸಂಚಾರ ನಿಷೇಧಿಸಲಾಗಿದೆ.

ಗಾಂಧಿ ಮೈದಾನದಲ್ಲಿ ಸಮಿತಿಯ ಮುಖ್ಯ ಸದಸ್ಯರುಗಳ ವಾಹನ ನಿಲುಗಡೆಗೆ ಮಾತ್ರ ಅವಕಾಶವಿದ್ದು, ಸಂಜೆ ೫ ಗಂಟೆ ನಂತರ ರಾಜಾಸೀಟ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸ ಲಾಗುತ್ತದೆ. ದ್ವಿಚಕ್ರವಾಹನಗಳಿಗೆ ನಗರಸಭೆ ಕಾರ್ಯಾಲಯ ಬಳಿ, ನಾಲ್ಕು ಚಕ್ರ ವಾಹನಗಳಿಗೆ ಕೋಟೆಯ ಆವರಣದಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಚಾರಿ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.