ಶನಿವಾರಸಂತೆ, ಅ. ೧೦: ಪಟ್ಟಣದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಹಾಗೂ ಭಾರತಿ ವಿದ್ಯಾಸಂಸ್ಥೆಯಲ್ಲಿ ಕಲಿತ ೧೯೮೩ ರಿಂದ ೧೯೯೫ ರ ಸಾಲಿನ ವಿದ್ಯಾರ್ಥಿಗಳ ಸ್ನೇಹಿತರ ಬಳಗದಿಂದ “ಗುರು ವಂದನಾ ಕಾರ್ಯಕ್ರಮ’’ ತಾ.೧೩ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚರಣ್, ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಜಗನ್‌ಪಾಲ್ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಗುರುವೃಂದದವರಾದ ಸಿ.ಎಲ್. ಸುಬ್ಬಯ್ಯ, ಡಿ.ಎಸ್. ರುಕ್ಮಿಣಿ, ದೊಡ್ಡಯ್ಯ, ಶಕುಂತಲಾ, ಹೇಮಾವತಿ, ವಿ.ಕೆ. ರತಿ, ಡಿ.ಎನ್. ಶಾಮಣ್ಣ, ನಾಗರತ್ನ, ಉತ್ತಪ್ಪ, ಭಾರತಿ ವಿದ್ಯಾಸಂಸ್ಥೆ ಪ್ರೌಢಶಾಲೆಯ ಜಿ.ಕೆ. ಲಕ್ಷಿö್ಮÃನಾರಾಯಣ ಭಟ್, ಬಿ.ಎ. ರಾಮಚಂದ್ರರಾವ್, ಬಿ.ಕೆ. ಮೊಗಪ್ಪ, ಕೆ.ಎಂ. ನಾಗರಾಜ್, ಎಸ್.ಪಿ. ರಾಜು, ಜಿ.ಬಿ. ನಾಗಪ್ಪ, ಎಂ.ಜಿ. ದೇವಯ್ಯ, ಎಂ.ಎನ್. ಮಲ್ಲಿಕಾರ್ಜುನ್, ವೇಣುಗೋಪಾಲ್, ವಿ. ರುದ್ರದೇವರ ಮಠ್ ಹಾಗೂ ಪದವಿ ಪೂರ್ವ ಕಾಲೇಜಿನ ನಾಗೇಶ್, ಸಿ.ಎಂ. ಪುಟ್ಟಸ್ವಾಮಿ, ಎಚ್.ಎ. ದೇವರಾಜ್, ಎಚ್.ಕೆ. ರಾಮನಂಜಯ್ಯ, ಎಂ.ಆರ್. ನಿರಂಜನ್, ಎಚ್.ಸಿ. ಮಲ್ಲೇಶ್, ಡಿ.ರವಿಕುಮಾರ್ ಹಾಗೂ ನಯನತಾರಾ ಇವರುಗಳನ್ನು ಡಾ.ಪುಟ್ಟರಾಜ್, ನಿವೃತ್ತ ಸೈನಿಕ ನಾಗಣ್ಣ, ಕಾವೇರಮ್ಮ ಹಾಗೂ ಚೆಸ್ಕಾಂನ ಗಿರೀಶ್ ಇವರುಗಳನ್ನು ಸನ್ಮಾನಿಸಲಾಗುತ್ತದೆ ಎಂದು ವಿದ್ಯಾರ್ಥಿಗಳ ಸ್ನೇಹಿತರ ಬಳಗದ ಪ್ರಕಟಣೆ ತಿಳಿಸಿದೆ.