ಸೋಮವಾರಪೇಟೆ, ಅ.೧೧ : ಉದ್ಯಮಿ ಹಾಗೂ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ ಅವರ ನಿಧನಕ್ಕೆ ಸೋಮವಾರಪೇಟೆಯಲ್ಲಿ ವರ್ತಕರ ಸಂಘದಿAದ ಸಂತಾಪ ಸೂಚಿಸಲಾಯಿತು.

ಇಲ್ಲಿನ ವರ್ತಕರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರತನ್ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ದೇಶ ಸೇವೆ ಮತ್ತು ಸಮಾಜ ಸೇವೆಗೆ ದೇಶದ ಎಲ್ಲಾ ವಾಣಿಜ್ಯೋದ್ಯಮಿಗಳಿಗೆ ಮಾದರಿಯಾಗಿದ್ದ ದಿಗ್ಗಜ ವ್ಯಾಪಾರ, ವಾಣಿಜ್ಯ, ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದು ಛೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಧನುರಾಜ್ ಹೇಳಿದರು.

ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಮನುಕುಮಾರ್ ರೈ, ಪ್ರಮೋದ್, ರಾಮಶೆಟ್ಟಿ, ಪ್ರಸನ್ನ, ಜನಾರ್ಧನ್, ಜಗದೀಶ್, ಮಂಜುನಾಥ್, ವಿಶು ಬಜೆಗುಂಡಿ, ಪ್ರಜಾ ಪೂಣಚ್ಚ, ಜಯೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.