ಶನಿವಾರಸಂತೆ, ಅ. ೧೧: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸೋಮವಾರಪೇಟೆ ತಾಲೂಕು ಘಟಕದ ೨೦೨೪-೨೯ರ ಅವಧಿಗೆ ಆಯ್ಕೆಯಾದ ಸದಸ್ಯರಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ರಾಜ್ಯ ಘಟಕಕ್ಕೆ ಕಳುಹಿಸಲು ಜಿಲ್ಲಾ ಘಟಕದ ಅಧ್ಯಕ್ಷ ಎಸ್.ವಿ. ಶಿವಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಹಾಗೂ ಕಲ್ಲುಮಠದ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ತಾಲೂಕು ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳು: ಅಧ್ಯಕ್ಷರಾಗಿ ಕೂಗೇಕೋಡಿ ಆದರ್ಶ, ಉಪಾಧ್ಯಕ್ಷರಾಗಿ ಸೋಮವಾರ ಪೇಟೆಯ ನಾಗೇಶ್, ಮಹಿಳಾ ಉಪಾಧ್ಯಕ್ಷೆ ಬೆಸೂರು ಆಶಾ, ದೇಣಿಗೆದಾರ ಉಪಾಧ್ಯಕ್ಷ ಹೊನ್ನೇಕೋಡಿ ಎಸ್.ವಿ. ಸಿದ್ದೇಶ್, ಪ್ರಧಾನ ಕಾರ್ಯದರ್ಶಿ ನಿಲುವಾಗಿಲು ಚಂದ್ರಶೇಖರ್, ಕಾರ್ಯದರ್ಶಿ ಹುಲುಕೋಡ್ ಸುಮಂತ್, ಮಹಿಳಾ ಕಾರ್ಯದರ್ಶಿ ಸೋಮವಾರಪೇಟೆಐ ಉಷಾರಾಣಿ ಅವರನ್ನು ಆಯ್ಕೆ ಮಾಡಲಾಯಿತು.