ಶ್ರೀಮಂಗಲ, ಅ. ೧೧: ಮಲ್ಲಮಾಡ ಕುಟುಂಬದ ಆಶ್ರಯದಲ್ಲಿ ಬೆಕ್ಕೆಸೊಡ್ಲೂರು ಗ್ರಾಮದ ಶಾರದ ಪ್ರೌಢಶಾಲಾ ಮೈದಾನದಲ್ಲಿ ತಾ. ೧೨ ರಂದು (ಇಂದು) ಮತ್ತು ೧೩ ರಂದು ಆಯೋಜಿಸಿರುವ ಕೊಡವ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ ಹಿನ್ನಲೆ ಶುಕ್ರವಾರ ಸ್ವಚ್ಛತಾ ಕಾರ್ಯಕ್ರಮವನ್ನು ಕುಟುಂಬದ ಸದಸ್ಯರು ಕೈಗೊಂಡರು.

ಬೆಕ್ಕೆಸೊಡ್ಲೂರು ಗ್ರಾಮದ ಮಂದತವ್ವ ದೇವಸ್ಥಾನ ಹೆಬ್ಬಾಗಿಲಿ ನಿಂದ ಟೂರ್ನಮೆಂಟ್ ನಡೆಯುವ ಶಾರದಾ ಪ್ರೌಢಶಾಲೆ ಮೈದಾನ ದವರೆಗಿನ ಕುಟ್ಟ-ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್, ಕಸ, ಕಡ್ಡಿಗಳನ್ನು ಸ್ವಚ್ಛಗೊಳಿಸಿದರು. ಸ್ವಚ್ಛತಾ ಕಾರ್ಯದಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಭಾಗವಹಿಸಿದ್ದರು.

ಇದೇ ಪ್ರಪ್ರಥಮ ಬಾರಿಗೆ ಕೊಡವ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಿರುವ ಈ ಟೂರ್ನಮೆಂಟ್ ಇಂದಿನಿAದ ಎರಡು ದಿನ ನಡೆಯಲಿದ್ದು, ೫೬ ಕುಟುಂಬಗಳು ಭಾಗವಹಿಸುತ್ತಿವೆ.