ಶ್ರೀಮಂಗಲ, ಅ. ೧೧: ಶ್ರೀಮಂಗಲ ವ್ಯಾಪ್ತಿಯಲ್ಲಿ ಹಾಡಹಗಲೇ ಹುಲಿಯೊಂದು ೨ ಗಂಟೆ ಅವಧಿಯಲ್ಲಿ ಒಂದು ಹಸುವನ್ನು ಕೊಂದು, ಇನ್ನೊಂದು ಹಸುವನ್ನು ಗಾಯಗೊಳಿಸಿದೆ. ಈ ಹಿನೆÀ್ನಲೆ ತಾ. ೧೨ರಂದು (ಇಂದಿನಿAದ) ಹುಲಿ ಓಡಿಸಲು ಕೂಂಬಿAಗ್ ತೊಡಗುವಂತೆ, ಹುಲಿ ಸೆರೆಗೆ ಅನುಮತಿ ಸಿಕ್ಕಿದ ಕೂಡಲೇ ಅರವಳಿಕೆ ನೀಡಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ವೆಸ್ಟ್ ನೆಮ್ಮಲೆ ಗ್ರಾಮದ ಬೆಳೆಗಾರ ಮಾಣೀರ ಕಿಶನ್ ಅವರ ೨೮ ದಿನದ ಕರು ಇರುವ ಹಾಲು ಕರೆಯುವ ಹಸುವನ್ನು ಬೆಳೆಗಾರ ಕಿಶನ್ ಅವರ ಪತ್ನಿಯ ಎದುರೇ ಮಧ್ಯಾಹ್ನ ೧೨ ಗಂಟೆಗೆ ಗದ್ದೆ ಬಳಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿದೆ. ಈ ಸಂದರ್ಭ ಬೆಳೆಗಾರ ಮತ್ತು ಅವರ ಪತ್ನಿ ೬೦ ಅಡಿ ದೂರದಲ್ಲಿ ಕೂಗಿದ ಹಿನೆÀ್ನಲೆ ಹಸುವನ್ನು ಕೊಂದು ಅಲ್ಲಿಂದ ಓಡಿಹೋಗಿದೆ.

ಈಸ್ಟ್ ನೆಮ್ಮಲೆ ಗ್ರಾಮದ ಬೆಳೆಗಾರ ಚೊಟ್ಟೆಯಾಂಡಮಾಡ ದರ್ಶನ್ ಅವರ ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಹಸುವಿನ ಮೇಲೆ ಮಧ್ಯಾಹ್ನ ೨ ಗಂಟೆ ವೇಳೆಗೆ ಹುಲಿ ದಾಳಿ ಮಾಡಿದೆ. ಸಮೀಪದ ತೋಟದಲ್ಲಿದ್ದ ದರ್ಶನ್ ಕುಟುಂಬದವರು ಕೂಗಿಕೊಂಡ ಹಿನ್ನೆಲೆ ಹಸುವನ್ನು ಗಾಯಗೊಳಿಸಿ, ಹುಲಿ ಪಕ್ಕದ ತೋಟಕ್ಕೆ ತೆರಳಿದೆ.

ಸ್ಥಳಕ್ಕೆ ಸಂಕೇತ್ ಪೂವಯ್ಯ ಭೇಟಿ: ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಹುಲಿ ದಾಳಿ ನಡೆಸಿದ ಉಭಯ ಕಡೆಗೆ ಭೇಟಿ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು ಕಳೆದ ಎರಡು ತಿಂಗಳಿAದ ಶ್ರೀಮಂಗಲ ಹೋಬಳಿ ಹಾಗೂ ನಾಲ್ಕೇರಿ ವ್ಯಾಪ್ತಿಯಲ್ಲಿ ಈ ಹುಲಿಯ ಚಲನವಲನವಿದೆ. ಈ ವ್ಯಾಪ್ತಿಯಲ್ಲಿ ಹೆಚ್ಚಿನ ಜಾನುವಾರುಗಳ ಮೇಲೆ ದಾಳಿಯಾಗಿದೆ. ಅರಣ್ಯ ಇಲಾಖೆ, ಜಾನುವಾರುಗಳು ಸಾವಿಗೀಡಾದ ಜಾಗದಲ್ಲಿ ಹುಲಿಯ ಚಲನವಲನ ಸೆರೆ ಹಿಡಿಯಲು ಕ್ಯಾಮರಾ ಅಳವಡಿಸುತ್ತಾ ಬಂದಿದ್ದು, ಇದರಲ್ಲಿ ಇದುವರೆಗೆ ಸೆರಿಯಾಗಿಲ್ಲ. ಕಳೆದ ಎರಡು ತಿಂಗಳಿನಿAದ ಜಾನುವಾರುಗಳ ಮೇಲೆ ಉಂಟಾಗಿರುವ ದಾಳಿಯನ್ನು ಅರಿತು ವೀರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಆವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವರಿಕೆ ಮಾಡಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಿ ಇದರ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದೇ ವಿಚಾರವನ್ನು ಪಿ.ಸಿ.ಸಿ.ಎಫ್ ಅವರ ಗಮನಕ್ಕೂ ತಂದು, ಹುಲಿ ಸೆರೆಗೆ ಅನುಮತಿಯನ್ನು ನೀಡಲು ಸೂಚಿಸಿದ್ದಾರೆ ಎಂದು ಸಂಕೇತ್ ಪೂವಯ್ಯ ವಿವರಿಸಿದರು.

ಈ ಸಂದರ್ಭ ಮಡಿಕೇರಿ ವನ್ಯಜೀವಿ ವಿಭಾಗದ ಡಿ.ಸಿ.ಎಫ್ ನೆಹರು ಹಾಗೂ ವೀರಾಜಪೇಟೆ ವನ್ಯಜೀವಿ ವಿಭಾಗದ ಡಿ.ಸಿ.ಆಫ್ ಜಗನ್ನಾಥ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಪ್ರಕರಣ ಗಂಭೀರವಾಗಿದ್ದು, ಹುಲಿ ಸೆರೆಗೆ ಕೂಂಬಿAಗ್ ಆರಂಭಿಸಲು ಸೂಚನೆ ನೀಡಿದರು. ಹುಲಿ ಸೆರೆಗೆ ಅನುಮತಿ ಸಿಕ್ಕಿದ ತಕ್ಷಣ ಅರವಳಿಕೆ ಮೂಲಕ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಇದೇ ಸಂದರ್ಭ ಸಾರ್ವಜನಿಕರು ಮಾತನಾಡಿ ಹುಲಿಯನ್ನು ಪ್ರತ್ಯಕ್ಷವಾಗಿ ನಾವು ಕಂಡಿದ್ದು ಭಾರಿ ಗಾತ್ರದ ಹುಲಿಯಾಗಿದ್ದು, ಇದು ಮನುಷ್ಯರ ಮೇಲೆ ದಾಳಿ ನಡೆಸುವ ಎಲ್ಲಾ ಅಪಾಯವಿದ್ದು, ಕೂಡಲೇ ಇದನ್ನು ಸೆರೆ ಹಿಡಿಯಬೇಕು. ಹುಲಿ ದಾಳಿ ಪ್ರಕರಣದಿಂದ ಶಾಲಾ ಮಕ್ಕಳು, ತೋಟದಲ್ಲಿ ಬೆಳೆಗಾರರು ಹಾಗೂ ಕಾರ್ಮಿಕರು ಕೆಲಸ ಮಾಡಲು ಆತಂಕ ಉಂಟಾಗಿದೆ. ಈ ಹುಲಿ ಮಾನವನ ಮೇಲೆ ದಾಳಿ ನಡೆಸುವ ಅಪಾಯ ವಿದೆ, ಆದ್ದರಿಂದ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಗಂಭೀರವಾಗಿ ಪರಿಗಣಿಸುವಂತೆ ಅಗ್ರಹಿಸಿದರು.

ಈ ಸಂದರ್ಭ ತಾ. ಪಂ. ಮಾಜಿ ಸದಸ್ಯ ಪೊಯೆಲೇಂಗಡ ಪಲ್ವಿನ್ ಪೂಣಚ್ಚ, ಕೊಡಗು ಬೆಳೆಗಾರ ಒಕ್ಕೂಟದ ಖಜಾಂಚಿ ಮಾಣೀರ ವಿಜಯ ನಂಜಪ್ಪ, ಸ್ಥಳೀಯ ಬೆಳೆಗಾರರಾದ ಚೊಟ್ಟೆಯಾಂಡಮಾಡ ವಿಶು, ತೀತಿರ ಪ್ರಭು, ಮಾಣೀರ ಉಮೇಶ್ ಹಾಜರಿದ್ದರು.