ಕಣಿವೆ, ಅ. ೧೩ : ಗುಡ್ಡೆಹೊಸೂರು ಹಾರಂಗಿ ರಸ್ತೆಯ ಬಳ್ಳೂರಿನಲ್ಲಿ ಭಾನುವಾರ ರಾತ್ರಿ ಆಟೋ ಅವಘಡಕ್ಕೀಡಾಗಿ ಸಿದ್ದಾಪುರದ ಯರವರ ರಾಜು ಎಂಬವರ ಪುತ್ರಿ ನೇತ್ರ ಎಂಬವರಿಗೆ ಗಂಭೀರ ಗಾಯವಾಗಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಆಟೋ ಚಾಲಕ ಸಿದ್ದಾಪುರದ ಮುತ್ತು ಹಾಗೂ ಆತನ ಸೋದರಿ ಪಾರ್ವತಿ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಆಟೋದಲ್ಲಿದ್ದ ಒಂದು ವರ್ಷದ ಮಗು ಅಪಾಯದಿಂದ ಪಾರಾಗಿದೆ.

ಭಾನುವಾರ ರಾತ್ರಿ ೭-೩೦ ರ ಸಮಯದಲ್ಲಿ ಗುಡ್ಡೆಹೊಸೂರು ಹಾರಂಗಿ ಮೂಲಕ ಬ್ಯಾಡಗೊಟ್ಟ ಹಾಡಿಗೆ ಆಟೋದಲ್ಲಿ ತೆರಳುತ್ತಿದ್ದಾಗ ಟೆಂಪೋ ಟ್ರಾವೆಲ್ ವಾಹನವೊಂದು ಅಡ್ಡ ಬಂದದ್ದರಿAದ ಆಟೋ ಅವಘಡಕ್ಕೀಡಾಯಿತು ಎಂದು ಚಾಲಕ ಮುತ್ತು ಹೇಳಿದ್ದಾರೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.