ಮಡಿಕೇರಿ, ಅ. ೧೩: ಕ್ಷÄಲ್ಲಕ ಕಾರಣಕ್ಕೆ ಪತಿ - ಪತ್ನಿ ನಡುವೆ ಕಲಹವೇರ್ಪಟ್ಟು ಪತ್ನಿ ಪತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೂಲತಃ ಬೈರಂಬಾಡ ನಿವಾಸಿಗಳಾದ ಧರ್ಮ (೨೬) ಹಾಗೂ ಶ್ರೇಯ (೨೩) ೯ ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿ ಮೂರ್ನಾಡಿನ ಗಾಂಧಿ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಇಂದು ಬೆಳಿಗ್ಗೆ ಇಬ್ಬರ ನಡುವೆ ಕ್ಷÄಲ್ಲಕ ವಿಚಾರಕ್ಕೆ ಜಗಳವಾಗಿದ್ದು, ಈ ಸಂದರ್ಭ ಶ್ರೇಯ ಚಾಕುವಿನಿಂದ ಧರ್ಮನ ಕುತ್ತಿಗೆಗೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ಆತ ಕೊನೆಯುಸಿರೆಳೆದಿದ್ದಾನೆ. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಶ್ರೇಯ ಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.