ಮಡಿಕೇರಿ, ಅ. ೧೫: ಇಲ್ಲಿಗೆ ಸಮೀಪದ ತಾಳತ್ತಮನೆ ನಿವಾಸಿ ತಿಲಕ ಪೂಜಾರಿ ಅವರ ಮನೆಯ ಅಂಗಳದಲ್ಲಿ ಕಾಣಿಸಿಕೊಂಡ ಅಂದಾಜ್ ೬ ಅಡಿ ಉದ್ದದ ನಾಗರ ಹಾವನ್ನು ಹಾಕತ್ತೂರಿನ ಉರಗ ತಜ್ಞ ಸ್ನೇಕ್ ಪಿರೇರ ಅವರು ಹಿಡಿದು ಸುರಕ್ಷಿತವಾಗಿ ಸಮೀಪದ ಕಾಡಿಗೆ ಬಿಟ್ಟಿದ್ದಾರೆ.