ಸೋಮವಾರಪೇಟೆ,ಅ.೧೫: ಪಟ್ಟಣದ ಸಿಎಸ್‌ಐ ಸಂತ ಜಾನ್ ದೇವಾಲಯದಲ್ಲಿ ಫಲೋತ್ಸವ ಹಬ್ಬ ಸಂಭ್ರಮದಿAದ ನಡೆಯಿತು.

ಫಲೋತ್ಸವ ಆರಾಧನೆಯಲ್ಲಿ ತಾವು ಬೆಳೆದಂತಹ ಪ್ರಥಮ ಫಲಗಳನ್ನು ದೇವಾಲಯದೊಳಗೆ ಮೆರವಣಿಗೆ ಮೂಲಕ ತರಲಾಯಿತು. ಆರಾಧನೆಯನ್ನು ಸಭಾ ಪಾಲಕರಾದ ಸ್ಯಾಮುವೆಲ್ ಮನೋಜ್ ಕುಮಾರ್, ಸಹಾಯಕ ಸಭಾ ಪಾಲಕರಾದ ಪ್ರಿಯದರ್ಶಿನಿ ನಡೆಸಿಕೊಟ್ಟರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಫಾದರ್ ಸುಜೇಂದ್ರ ಡಗ್ಲಾಸ್ ಅವರು ಹಬ್ಬದ ಮಹತ್ವವನ್ನು ತಿಳಿಸಿದರು.

ಪ್ರಥಮ ಫಲಗಳನ್ನು ದೇವಾಲಯದಲ್ಲಿ ಹರಾಜು ಮಾಡಲಾಯಿತು. ನಂತರ ಆಟೋಟ ಸ್ಪರ್ಧೆಗಳು ನಡೆದವು. ಸಭೆಯಲ್ಲಿ ಹಿರಿಯರಾದ ಪುಷ್ಪ ಜಾಯ್ ರವರನ್ನು ಸನ್ಮಾನಿಸಲಾಯಿತು. ದೇವಾಲಯ ಆಡಳಿತ ಮಂಡಳಿ ಕಾರ್ಯದರ್ಶಿ ಚಾರ್ಲಿ, ಖಜಾಂಚಿ ಪುಷ್ಪ ಜಾಯ್, ಸಮಿತಿ ಸದಸ್ಯರಾದ ಅನಿಲ್ ಕೆ., ಡಯಾಸಿಸ್ ಕೌನ್ಸಿಲ್ ಸದಸ್ಯ ಸಾಲೋಮನ್ ಡೇವಿಡ್ ಇದ್ದರು.