ನಾಪೋಕ್ಲು, ಅ. ೧೫: ಸಮೀಪದ ಬಲಮುರಿಯ ಕಾವೇರಿ ಕಣ್ವ ಮುನೀಶ್ವರ ಸಭಾ ಭವನದಲ್ಲಿ ಸಾಮೂಹಿಕ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸವನ್ನು ನೆರವೇರಿಸ ಲಾಯಿತು.

ಸಂಪನ್ಮೂಲ ವ್ಯಕ್ತಿ ಮೈಸೂರಿನ ನಾ. ಶ್ರೀನಿವಾಸ ಮಾತನಾಡಿ ತಮ್ಮೊಳಗಿರುವ ಬುದ್ಧಿಶಕ್ತಿಯನ್ನು ಉಪ ಯೋಗಕ್ಕೆ ಬಳಕೆ ಮಾಡಿಕೊಳ್ಳಬೇಕು. ಬೆಂಕಿ ಕಡ್ಡಿ ರಂಜಕದೊಡನೆ ವರ್ತಿಸಿದಾಗ ಕಿಡಿ ಹೊತ್ತುವಂತೆ ನಮ್ಮೊಳಗಿನ ಬುದ್ಧಿಶಕ್ತಿಯನ್ನು ಉಪಯೋಗಿಸಲು ನಾವು ಕಲಿತಾಗ ಮಾತ್ರ ಅದು ಪ್ರಖರವಾಗಿ ಬೆಳಗುತ್ತದೆ ಎಂದರು. ಸಮಾರಂಭದ ಅಧ್ಯಕ್ಷೀಯ ಭಾಷಣವನ್ನು ಜ್ಞಾನಜ್ಯೋತಿ ಶಾಲೆಯ ಅಧ್ಯಕ್ಷ ರವಿ ಚೀಯಣ್ಣ ನೆರವೇರಿಸಿ ಪ್ರತಿಯೊಬ್ಬರೂ ತಮಗೆ ದೊರಕುವ ಸದಾ ಅವಕಾಶವನ್ನು ಸಮರ್ಥವಾಗಿ ಉಪಯೋಗಿಸಿ ಕೊಂಡು ವಿದ್ಯಾವಂತರಾಗಬೇಕು ಎಂದರು.

ಜಿಸಿಟಿ ಕಾರ್ಯದರ್ಶಿ ರವಿ ಭಟ್ ಸಮಾರಂಭವನ್ನು ನೆರವೇರಿಸಿಕೊಟ್ಟರು.