ಚೆಯ್ಯಂಡಾಣೆ, ಅ. ೧೫: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್., ಎಸ್.ಎಸ್.ಎಫ್. ಎಮ್ಮೆಮಾಡು ಶಾಖೆ ವತಿಯಿಂದ ಹುಬ್ಬುರಸೂಲ್ ಕಾನ್ಫರೆನ್ಸ್ ಎಮ್ಮೆಮಾಡುವಿನ ತಾಜುಲ್ ಉಲಮಾ ನಗರದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಸೂಫಿ ಶಹೀದ್ ದರ್ಗಾದಲ್ಲಿ ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಙಳ್ ಮೌಲೂದ್‌ಗೆ ಚಾಲನೆ ನೀಡಿದರು. ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಉಲಮಾ ಸಂಗಮ ಕಾರ್ಯಕ್ರಮವನ್ನು ಶಿಹಾಬುದ್ದೀನ್ ನೂರಾನಿ ಉದ್ಘಾಟಿಸಿದರು.

ಉಮ್ಮರ್ ಸಖಾಫಿ ಕೊಂಡAಗೇರಿ ವಿಷಯ ಮಂಡಿಸಿದರು. ಸಂಜೆ ನಡೆದ ಬೈಕ್ ಜಾಥಾಕ್ಕೆ ಸಯ್ಯದ್ ಕುಂಞÂಕೋಯ ಅಲ್ ಹೈದರೂಸಿ ತಂಙಳ್ ನೇತೃತ್ವ ವಹಿಸಿದರು. ಸದಾತ್ ನಗರದಿಂದ ಆರಂಭಗೊAಡ ಸಂದೇಶ ಜಾಥಾಕ್ಕೆ ಸಯ್ಯದ್ ಸಮಿಹ್ ತಂಙಳ್ ದುಆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಜಾಥಾವು ಎಮ್ಮೆಮಾಡು ವಿನ ಮಾರ್ಹೂಂ ಅಲಿ ಉಸ್ತಾದ್ ಅವರ ಖಬರ್ ಸ್ಥಾನಕ್ಕೆ ತೆರಳಿ ಝಿಯಾರತ್ ನಡೆಸಿ, ಎಮ್ಮೆಮಾಡು ಗ್ರಾಮದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಜುಲ್ ಉಲಮಾ ನಗರದಲ್ಲಿ ಸಮಾಪನ ಗೊಂಡಿತು. ಕಾರ್ಯಕ್ರಮದ ಧ್ವಜಾ ರೋಹಣವನ್ನು ಸ್ವಾಗತ ಸಮಿತಿಯ ಕನ್ವಿನರ್ ಶಾದುಲಿ ಹಾಜಿ ಚೆಂಬರAಡ ನೆರವೇರಿಸಿದರು. ಜಾಥಾದ ಉಸ್ತುವಾರಿಯಾಗಿ ಇಬ್ರಾಹಿಂ ಸಅದಿ ನೇತೃತ್ವ ವಹಿಸಿದ್ದರು. ಸಂದೇಶ ಜಾಥಾವನ್ನು ಉದ್ದೇಶಿಸಿ ಸಯ್ಯದ್ ಝಕರಿಯ ಸಅದಿ ಅಲ್ ಹೈದರೂಸಿ ಮಾತನಾಡಿದರು. ಅಸ್ಮಾಉಲ್ ಹುಸ್ನಾ ಮಜ್ಲಿಸ್‌ಗೆ ಸಯ್ಯದ್ ಅಝೀಝ್ ತಂಙಳ್ ನೇತೃತ್ವ ವಹಿಸಿದರು.

ರಾತ್ರಿ ಕೂರ್ಗ್ ಜಮಿಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಹುಬ್ಬುರಸೂಲ್ ಮಹಾ ಸಮ್ಮೇಳನ ವನ್ನು ಸಯ್ಯದ್ ಶಿಹಾಬುದ್ದೀನ್ ಸಖಾಫಿ ಕಿಲ್ಲೂರ್ ತಂಙಳ್ ಉದ್ಘಾಟಿಸಿದರು. ಇಲ್ಯಾಸ್ ಅಲ್ ಹೈದರೂಸಿ ತಂಙಳ್ ಭಾಷಣ ಮಾಡಿದರು. ವಾಗ್ಮಿ ಫಾರೂಕ್ ನಇಮಿ ಕೊಲ್ಲಂ ಹುಬ್ಬುರಸೂಲ್ ಭಾಷಣ ನಡೆಸಿದರು.

ಈ ಸಂದರ್ಭ ಕೂರ್ಗ್ ಜಂಹಿಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವೀರಾಜಪೇಟೆ, ಸಯ್ಯದ್ ಇಸಾಕ್ ತಂಙಳ್, ಶಾದುಲಿ ಹಾಜಿ, ಅಶ್ರಫ್ ಜೌಹರಿ, ಸಯ್ಯದ್ ನುಹ್ಮಾನ್ ಸಅದಿ, ಫಾರೂಕ್ ಸಖಾಫಿ ನೂರಾನಿ, ಝಕರಿಯ ಜೌಹರಿ, ಹಫೀಲ್ ಶಬೀರ್ ಹಿಮಮಿ, ಹಾರಿಸ್ ಜೌಹರಿ, ಕೆ.ಎಂ.ಜೆ., ಎಸ್.ವೈ.ಎಸ್., ಎಸ್.ಎಸ್.ಎಫ್. ಕಾರ್ಯಕರ್ತರು, ಉಲಮಾ ಉಮಾರ ನೇತಾರರು, ಗ್ರಾಮಸ್ಥರು, ಸಾರ್ವಜನಿಕರು, ಮತಿತ್ತರರು ಹಾಜರಿದ್ದರು.