ಚೆಟ್ಟಳ್ಳಿ, ಅ. ೧೫: ಚೆಟ್ಟಳ್ಳಿಯ ಪುರಾತನ ಶ್ರೀಮಂಗಲ ಶ್ರೀ ಭಗವತಿ ದೇವಾಲಯದಲ್ಲಿ ಕಾವೇರಿ ಸಂಕ್ರಮಣದ ಹಿನ್ನೆಲೆ ಕಾವೇರಿ ಸಂಕ್ರಮಣ ಧಾರೆ ಪೂಜೆ ನೆರವೇರಿತು. ವಿಘ್ನೇಶ್ವರ, ಕ್ಷೇತ್ರಪಾಲಕ, ನಾಗನೆಲೆಯಲ್ಲಿ ಪೂಜೆ ಸಲ್ಲಿಸಿದ ನಂತರ ಶ್ರೀ ಭಗವತಿ ನೆಲೆಯಲ್ಲಿ ಕಾವೇರಿ ಸಂಕ್ರಮಣ ಧಾರೆ ಪೂಜೆಯ ಹಿನ್ನೆಲೆ ಊರಿನ ಹಿರಿಯರಾದ ಬಟ್ಟೀರ ಕಟ್ಟಿ ಕಾವೇರಿಯಪ್ಪನವರು ದೇವರ ನೆಲೆಯಲ್ಲಿ ತಲಕಾವೇರಿಯಲ್ಲಿ ತೀರ್ಥೋದ್ಭವದ ನಂತರ ಕಣಿಪೂಜೆ ನೆರವೇರಲಿದೆ. ಎಲ್ಲರಿಗೂ ಒಳಿತನ್ನು ಮಾಡಲೆಂದು ಬೇಡಿಕೊಂಡರು.

ಈ ಸಂದರ್ಭ ಹಿರಿಯ ಅರ್ಚಕ ರಾಧಾಕೃಷ್ಣ ಭಗವತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು. ನಂತರದಲ್ಲಿ ಅನ್ನಸಂತರ್ಪಣೆ ನೆರವೇರಿತು.