ಗುಡ್ಡೆಹೊಸೂರು, ಅ. ೧೫: ಡಿಸೆಂಬರ್ ೧೩ ರಂದು ನಡೆಯುವ ಹನುಮ ಜಯಂತಿ ಜನೋತ್ಸವದ ಅಂಗವಾಗಿ ಗುಡ್ಡೆಹೊಸೂರು ವ್ಯಾಪ್ತಿಯ ಬಸವನಹಳ್ಳಿಯ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಹೊರಡುವ ಮೆರವಣಿಗೆಯು ಕುಶಾಲನಗರ ತಲುಪಲಿದೆ, ಈ ಹಿನ್ನೆಲೆ ಗುಡ್ಡೆಹೊಸೂರು ಸಮುದಾಯ ಭವನದಲ್ಲಿ ಸಭೆ ನಡೆಸಲಾಯಿತು.

ಹನುಮ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ಶಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಅರುಣ್, ಉಪಾಧ್ಯಕ್ಷರಾಗಿ ಕೋಳಿಬೈಲ್ ಉದಯ್ ಆಯ್ಕೆಯಾದರು. ಸಭೆಯಲ್ಲಿ ಇಲ್ಲಿನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಬಿ.ಸಿ. ಪ್ರದೀಪ್, ಗ್ರಾ.ಪಂ. ಸದಸ್ಯ ಕುಡೆಕ್ಕಲ್ ನಿತ್ಯಾನಂದ, ಆರ್.ಎಸ್.ಎಸ್. ಪ್ರಮುಖ ಮಹೇಂದ್ರ, ಬಿ.ಸಿ. ನವೀನ್ ಮತ್ತು ಸದಸ್ಯರು ಹಾಜರಿದ್ದರು.