ನಾಪೋಕ್ಲು,ಅ.೧೫: ಗ್ರಾಮೀಣ ಜನರು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಮರಸ್ಯ ಮೂಡುತ್ತದೆ ಎಂದು ಮಾಜಿ ಸೈನಿಕ ಸಿ. ಸುರಿ ಮುತ್ತಪ್ಪ ಹೇಳಿದರು. ಸಮೀಪದ ಮರಂದೋಡ ಕ್ರೀಡಾ ಸಮಿತಿ ವತಿಯಿಂದ ಮರಂದೋಡ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಅಯೋಜಿಸಲಾಗಿದ್ದ ೪೧ನೇ ವರ್ಷದ ವಾರ್ಷಿಕ ಕ್ರೀಡಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾ ಸಮಿತಿಯ ಅಧ್ಯಕ್ಷ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗಾಗಿ ವಿವಿಧ ಕ್ರೀಡಾ ಕೂಟಗಳು ನಡೆದವು. ಮಕ್ಕಳು, ಮಹಿಳೆಯರು, ಪುರುಷರು

ವಿವಿಧ ವಯೋಮಾನದವರು ಪಾಲ್ಗೊಂಡಿದ್ದರು.

.೨೨ ಶೂಟಿಂಗ್ ಸ್ಪರ್ಧೆಯಲ್ಲಿ ಬಾರಿಕೆ ಜೀವಿತ ಪ್ರಥಮ ಸ್ಥಾನ ಗಳಿಸಿದರು .ದ್ವಿತೀಯ ಸ್ಥಾನವನ್ನು ಮುಕ್ಕಾಟಿರ ಅಜಿತ್ ಪಡೆದರು.೧೨ ಬೋರ್ ಶೂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮುಕ್ಕಾಟಿರ ಅಜಿತ್ ತಮ್ಮದಾಗಿಸಿಕೊಂಡರು. ದ್ವಿತೀಯ ಸ್ಥಾನವನ್ನು ಮಾರ್ಚಂಡ ಮಂದಣ್ಣ ಗಳಿಸಿದರು. ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ

ನಗದು ಬಹುಮಾನವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಅಂಚೆ ಇಲಾಖೆಯ ನಿವೃತ್ತ ನೌಕರ ಬಾರಿಕೆÀ ಜನಾರ್ಧನ್, ಹೆಎಎಲ್‌ನ ನಿವೃತ್ತ ಉದ್ಯೋಗಿ ಅನ್ನಾಡಿಯಂಡ ಪ್ರದೀಪ್‌ಕುಮಾರ್, ನಿವೃತ್ತ ಸಿಆರ್‌ಪಿಎಫ್ ಉದ್ಯೋಗಿ ಚೋಯಮಾಡಂಡ ಪವಿತ್ರ, ಮರಂದೋಡ ಸರ್ಕಾರಿ ಪ್ರಾಥಮಿಕ ಶಾಲೆ ಸ್ಥಳ ದಾನಿಗಳಾದ ಚಂಡೀರ ಜಗದೀಶ್, ಕಕ್ಕಬ್ಬೆ ವಿಎಸ್‌ಎಸ್‌ಎನ್ ನಿರ್ದೇಶಕ ನಿಡುಮಂಡ ಹರೀಶ್ ಪೂವಯ್ಯ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಚಂಡಿರ ಪದವಿ ಪೊನ್ನಮ್ಮ ಪ್ರಾರ್ಥಿಸಿದರು. ಕಳೆದ ವರ್ಷದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಮುಕ್ಕಾಟಿರ ಅಜಿತ್ ವಾಚಿಸಿ ಕ್ರೀಡಾ ಸಮಿತಿ ಸದಸ್ಯ ಚಂಡೀರ ರಾಲಿ ಗಣಪತಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಕ್ರೀಡಾಕೂಟದಲ್ಲಿ ವಿವಿಧ ವಯೋಮಾನದವರಿಗೆ ಸೂಜಿ ದಾರ ಓಟ, ಭಾರದ ಕಲ್ಲು ಎಸೆತ, ಮೇಣದಬತ್ತಿ ಓಟ,ಅಡಿಕೆ ಹಾಳೆಯಲ್ಲಿ ದಂಪತಿಯನ್ನು ಎಳೆಯುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.