ಐಗೂರು, ಅ. ೧೭: ಐಗೂರು ವಲಯ ಕಾಂಗ್ರೆಸ್ ಪಕ್ಷದ ನೂತನ ಸಮಿತಿಯ ಆಯ್ಕೆಯನ್ನು ಸ್ಥಳೀಯ ಗುಳಿಗಪ್ಪ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಸಭೆಯಲ್ಲಿ ಎಲ್ಲರ ಒಮ್ಮತದೊಂದಿಗೆ ಕೆ.ಎಲ್. ಹೊನ್ನಪ್ಪ ಅವರನ್ನು ಐಗೂರು ವಲಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸವಿತಾ ಮತ್ತು ಮೇಘನ್ ಅವರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಭೂ ನ್ಯಾಯ ಮಂಡಳಿಯ ಸುನಿಲ್, ತಾ. ಸಮಿತಿಯ ವಿನೋದ್, ಯೋಗೇಶ್, ಭರತ್ ಕುಮಾರ್, ಕೆ.ಪಿ. ಮುತ್ತಪ್ಪ, ವಿಶ್ವನಾಥರಾಜೇ ಅರಸು, ಮಾಜಿ ಗ್ರಾಂ.ಪA. ಅಧ್ಯಕ್ಷ ರಮೇಶ್, ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.