ಮಡಿಕೇರಿ, ಅ. ೧೭: ಕರ್ನಾಟಕ ಮತ್ತು ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದಿAದ ಬಾಗಲಕೋಟೆ ಕಾಲೇಜು ಮೈದಾನದಲ್ಲಿ ನಡೆದ ೧೪ನೇ ಕರ್ನಾಟಕ ರಾಜ್ಯ ಕಿವುಡರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಡಗು ತಂಡ ತೃತೀಯ ಬಹುಮಾನ ಪಡೆದುಕೊಂಡಿತು.

ಪ್ರಥಮ ಬಹುಮಾನ ಮಂಗಳೂರು, ದ್ವಿತೀಯ ಬಹುಮಾನ ಮಂಡ್ಯ, ತೃತೀಯ ಕೊಡಗು ಹಾಗೂ ನಾಲ್ಕನೇ ಬಹುಮಾನವನ್ನು ಮೈಸೂರು ತಂಡ ತಮ್ಮದಾಗಿಸಿಕೊಂಡಿತು. ಸಂಜ್ಞೆ ಭಾಷೆ ಹಾಗೂ ಧ್ವಜದ ಚಿಹ್ನೆಗಳನ್ನು ನೋಡುವ ಮೂಲಕ ಕ್ರೀಡೆಗಳಲ್ಲಿ ಸೆಣಸಾಟ ಆರಂಭಿಸಿದ ಕ್ರೀಡಾ ಪಟುಗಳು ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿ ಗಮನ ಸೆಳೆದರು.

೨೦೨೫ರ ಅಕ್ಟೋಬರ್ ತಿಂಗಳಿನಲ್ಲಿ ೧೫ನೇ ಕರ್ನಾಟಕ ರಾಜ್ಯ ಕಿವುಡರ ಕ್ರೀಡಾಕೂಟವು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆಯಲಿದೆ.