ವೀರಾಜಪೇಟೆ, ಅ. ೧೭: ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕಮಲಮ್ಮ ಕೆ.ಎನ್. ಹಾಗೂ ವೀರಾಜಪೇಟೆ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಬಿ.ಎ. ಶೈಲಾ ಅವರು ರಾಜ್ಯಮಟ್ಟದ ಗುರುಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಧಾರವಾಡದ ಅಪ್ನಾದೇಶ ಫೌಂಡೇಶನ್ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಈರ್ವರು ಶಿಕ್ಷಕಿಯರು ಈ ಪ್ರಶಸ್ತಿಯನ್ನು ಧಾರವಾಡದ ನಾಡೋಜ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದರು.

ಶಿಕ್ಷಕಿ ಕಮಲಮ್ಮ ವೀರಾಜಪೇಟೆ ಸಮೀಪದ ಬೇಟೋಳಿ ನಿವಾಸಿಯಾಗಿದ್ದಾರೆ. ಶಿಕ್ಷಕಿ ಶೈಲಾ ಮೂಲತಃ ಐಮಂಗಲ ಗ್ರಾಮದವರಾಗಿದ್ದಾರೆ.