ಕುಲದೇವಿ ಶ್ರೀಕಾವೇರಿ ಮಾತೆಯ ಉಗಮಸ್ಥಾನ ಕೊಡಗಿನ ತಲಕಾವೇರಿಯ ತಪ್ಪಲಲ್ಲಿ ಜೀವನದಿ ಕಾವೇರಿ ಸಾವಿರಾರು ಭಕ್ತ ಸಮೂಹದ ಮಂಗಳ ಘೋಷಗಳ ನಡುವೆ ಅಕ್ಷಯ ತೀರ್ಥರೂಪಿಣಿಯಾಗಿ ಒಲಿದು ಬರುವ ಪವಿತ್ರ ದಿನದ ಸಾಂಪ್ರದಾಯಿಕ ಆಚರಣೆಯೇ “ಕಾವೇರಿ ತುಲಾ ಸಂಕ್ರಮಣ” ಹಾಗೂ “ಕಾವೇರಿ ಚಂಗ್ರಾAದಿ”.

ವರ್ಷAಪ್ರತಿ ಅಕ್ಟೋಬರ್ ತಿಂಗಳ ಮಧ್ಯಭಾಗದ ತುಲಾ (ಮಾಸ) ಸಂಕ್ರಮಣದAದು ನಡೆಯುವ ಕಾವೇರಿ ಮಾತೆಯ ಉತ್ಸವದ ಸಾಂಪ್ರದಾಯಿಕ ಆಚರಣೆಯಾಗಿದೆ. ದೇವಾಲಯದ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಅರ್ಚಕರು ತೀಥೋದ್ಭವದ ದಿನದ ಲಗ್ನ ಹಾಗೂ ಮುಹೂರ್ತದ ದಿನವನ್ನು ತಿಳಿಸಿದಂತೆ ಸೂರ್ಯನು ತುಲಾರಾಶಿಗೆ ಸೇರುವ ಸಮಯದಲ್ಲೇ ಕೊಡಗಿನ ಕುಲದೇವಿ ಕಾವೇರಿಯು ತನ್ನ ಉಗಮಸ್ಥಾನ ತಲಕಾವೇರಿಯ ಕುಂಡಿಕೆಯಿAದ ತೀರ್ಥೋದ್ಭವವಾಗಿ ಬರುವಳು. ಶ್ರೀ ಕಾವೇರಿ ಮಾತೆಯು ತೀರ್ಥರೂಪಿಯಾದ ಬಗ್ಗೆ ಪುರಾಣ ಕಾಲದಲ್ಲಿ ನಡೆದ ಸತ್ಯ ಘಟನೆಗಳ ಐತಿಹಾಸಿಕ ಪುರಾಣ ಕಥೆಯೇ ಇದೆ.

ಕುಲದೇವಿ ಕಾವೇರಿಯ ಪೌರಾಣಿಕ ಹಿನ್ನೆಲೆ...

ಶ್ರೀ ಕಾವೇರಿ ಮಾತೆಯು ಮಹರ್ಷಿ ಅಗಸ್ತö್ಯರ ಪತ್ನಿ. ಕವೇರ ಮುನಿಯ ಸಾಕುಮಗಳು, ಬಹ್ಮದೇವರ ಮಾನಸಪುತ್ರಿ ಲೋಪಾಮುದ್ರೆ ಎನ್ನುವುದು ಈಕೆಯ ಪೂರ್ವನಾಮ. ಮಕ್ಕಳಿಲ್ಲವೆಂಬ ಕೊರಗಿನಿಂದ ಸಂತಾನ ಪ್ರಾಪ್ತಿಗಾಗಿ ಕವೇರ ಮುನಿಯು ಎಸಗಿದ ತಪಸ್ಸಿಗೆ ಒಲಿದ ಬ್ರಹ್ಮನು ಪ್ರಾಚೀನ ಕರ್ಮ ಫಲದಂತೆ ಕವೇರ ಮುನಿಗೆ ಈ ಜನ್ಮದಲ್ಲಿ ಸಂತಾನ ಭಾಗ್ಯವಿಲ್ಲ ವೆಂದು ಹೇಳಿ ತನ್ನ ಮಾನಸ ಪುತ್ರಿಯಾದ ಲೋಪಾ ಮುದ್ರೆಯನ್ನು ದತ್ತುಪುತ್ರಿಯಾಗಿ ಸ್ವೀಕರಿಸುವಂತೆ ಹೇಳಿ ಅನುಗ್ರಹಿಸಿದರಂತೆ. ಕವೇರ ಮುನಿಯು ಸಾಕು ಮಗಳಾದ ಲೋಪಾಮುದ್ರೆಯು ಶ್ರೀ ಕಾವೇರಿಮಾತೆ ಎಂಬ ಹೆಸರಿನಲ್ಲಿ ವಿಖ್ಯಾತಿಯಾದಳು.

ಉತ್ತರ ಭಾರತದಿಂದ ದಕ್ಷಿಣ ದೇಶಕ್ಕೆ ಆಗಮಿಸಿದ ಅಗಸ್ತö್ಯ ಮಹರ್ಷಿಗಳು ದಿವ್ಯಾಂಶ ಸಂಭೂತೆಯಾದ ಕಾವೇರಿಯನ್ನು ನೋಡಿ ತ್ರಿಕಾಲ ಜ್ಞಾನಿಗಳಾಗಿದ್ದರಿಂದ ಅವರು ಕಾವೇರಿಯ ಜೀವನೋದ್ದೇಶವನ್ನು ಗ್ರಹಿಸಿಕೊಂಡರು. ಅದರಂತೆ ಅಗಸ್ತö್ಯ ಮಹರ್ಷಿಗಳು ಕಾವೇರಿ ಯನ್ನು ವಿವಾಹವಾಗಲು ಬಯಸಿ ದರಂತೆ. ಅವರ ಅಭಿಲಾಷೆಗೆ ಕಾವೇರಿಯು ಒಪ್ಪಿ ತನ್ನನ್ನು ಯಾವ ಕಾಲಕ್ಕೂ ಒಂದು ಕ್ಷಣವೂ ಬಿಟ್ಟು ಇರಕೂಡದು. ಒಂದು ವೇಳೆ ಬಿಟ್ಟು ಹೋದದ್ದೆಯಾದರೆ ತತ್‌ಕ್ಷಣವೇ ತಾನು ನದಿಯಾಗಿ ರೂಪ ತಳೆದು ಸಮುದ್ರದ ಕಡೆ ಹೊರಟು ಹೋಗುತ್ತೇನೆಂದಳು. ಅದಕ್ಕೆ ಅಗಸ್ತö್ಯ ಮಹರ್ಷಿಗಳು ಒಪ್ಪಿ ಋಷ್ಯಾಶ್ರಮದ ಪವಿತ್ರ ನೆಲೆಯಲ್ಲಿ ಶ್ರೀ ಅಗಸ್ತö್ಯ-ಕಾವೇರಿಯ ವಿವಾಹವು ಬಹಳ ವೈಭವದಿಂದ ನೆರವೇರಿತು.

ಹೀಗೆ ದಿನಕಳೆದಂತೆ ಒಂದು ದಿನ ಅಗಸ್ತö್ಯ ಮಹರ್ಷಿಗಳು ಬ್ರಾಹ್ಮೀ ಮುಹೂರ್ತದಲ್ಲಿ ಬಹ್ಮಗಿರಿಯ ತಪ್ಪಲಿನ ಕನಕಜೆಗೆ ಸ್ನಾನ ಸಂಧ್ಯಾ ವಂದನೆಗೆ ತೆರಳುವ ಮುನ್ನ ಕಾವೇರಿಯನ್ನು ಜಲರೂಪಿಯಾಗಿ ಪರಿವರ್ತಿಸಿ ತನ್ನ ಕಮಂಡಲುವಿನಲ್ಲಿ ಸೇರಿಸಿ, ಶಿಷ್ಯರಿಗೆ ಜಾಗ್ರತೆಯಿಂದ ಕಾಯ್ದುಕೊಳ್ಳಿ ಎಂದು ಹೇಳಿ ಕಮಂಡಲುವನ್ನು ಬ್ರಹ್ಮ ಕುಂಡಿಕೆಯಲ್ಲಿಟ್ಟು ತೆರಳಿದರು. ಆ ಸಮಯದಲ್ಲಿ ಜಲರೂಪಿಣಿ ಯಾಗಿದ್ದ ಕಾವೇರಿಯು ಮೇಲುಕ್ಕಿ ಬ್ರಹ್ಮ ಕುಂಡಿಕೆಗೆ ಹರಿದು ನದಿ ರೂಪಿಯಾಗಿ ಮುಂದೆ ಹರಿದಾಗ ಶಿಷ್ಯರು ತಡೆಯಲು ಮುಂದಾದಾಗ ಕಾವೇರಿಯು ಗುಪ್ತಗಾಮಿನಿಯಾಗಿ ಮುಂದೆ ಸಾಗಿದಳು. ಅತ್ತ ಅಗಸ್ತö್ಯ ಮಹರ್ಷಿಗಳಿಗೆ ತಮ್ಮ ದಿವ್ಯದೃಷ್ಟಿ ಮೂಲಕ ಈ ವಿಚಾರ ತಿಳಿದು ಧಾವಿಸಿ ಬಂದು ಕಾವೇರಿಯನ್ನು ನದಿಯಾಗಿ ಹೋಗುವುದು ಬೇಡವೆಂದು ಕೇಳಿಕೊಂಡರು. ಆಗ ಕಾವೇರಿಯು ತಾನು ತನ್ನ ಶರೀರದ ಒಂದAಶದಲ್ಲಿ ನದಿಯಾಗಿ ತೆರಳಿ ಲೋಕ ಕಲ್ಯಾಣಕ್ಕಾಗಿಯೂ, ಉಳಿದೊಂದAಶ ಪತ್ನಿಯಾಗಿ ಉಳಿಯುವೆನೆಂದು ಅಗಸ್ತö್ಯ ಮಹರ್ಷಿಗೆ ಸಮಾಧಾನ ಹೇಳಿ ತನ್ನ ದಿವ್ಯಾವತಾರ ಲೀಲಾ ಕಾರ್ಯವನ್ನು ಮುಂದುವರಿಸಿ ನದಿಯಾಗಿ ಹರಿದಳು. ಪುಣ್ಯ ಕ್ಷೇತ್ರವಾದ ಭಾಗಮಂಡಲದ ಕನ್ನಿಕಾ-ಸುಜ್ಯೋತಿ ನದಿಗಳು ಕಾವೇರಿಯೊಡನೆ ಸಂಗಮವಾಗಿ ಸಂಗಮ ಕ್ಷೇತ್ರವಾಗಿ ರೂಪುಗೊಂಡಿತು. ಎಲ್ಲಿಯ ತನಕ ನೀವು ನನ್ನನ್ನು ನಂಬಿ ಆರಾಧಿಸುತ್ತೀರೋ ಅಲ್ಲಿ ತನಕ ನಾಡಿಗೆಲ್ಲ ಮಾತೆಯಾಗಿ ಸಮಸ್ತರ ಯೋಗ ಕ್ಷೇಮವನ್ನು ನೋಡಿ ಕೊಳ್ಳುತ್ತೇನೆಂದು ಭಾಷೆ ನೀಡಿ ಶ್ರೀ ಕಾವೇರಿ ಮಾತೆಯು ನದಿಯಾಗಿ ಮುಂದೆ ಹರಿಯತೊಡಗಿದಳು.

ಇನ್ನೊಂದು ಪುರಾಣ ಕಥೆಯ ಪ್ರಕಾರ ವಿಷ್ಣುಮಾಯಾ ಎಂಬ ಬ್ರಹ್ಮನ ಮಗಳನ್ನು ಕವೇರಮುನಿ ಸಾಕಿಕೊಂಡಿದ್ದರAತೆ. ವಿಷ್ಣುವಿನ ಆಜ್ಞೆಯಂತೆ ಈ ಕನ್ಯೆಯು ದೇಹರೂಪಿಯಾಗಿ ಲೋಪಮುದ್ರಾ ಎಂಬ ಹೆಸರಿನಿಂದ ಅಗಸ್ತö್ಯ ಸತಿಯು ನದಿ ರೂಪಿಯಾಗಿ ಕಾವೇರಿಯಾದಳು. ದಕ್ಷಿಣದಲ್ಲಿ ಜಲಕ್ಷಾಮವಿದೆಯೆಂದು ಸುದ್ದಿ ತಿಳಿದ ಅಗಸ್ತö್ಯನು ತನ್ನ ಪತ್ನಿಯ ಜೊತೆ ಸಹ್ಯಾದ್ರಿಯ ತಪ್ಪಲ ಬ್ರಹ್ಮಗಿರಿಗೆ ಬಂದಾಗ ಜೋರಾದ ಗಾಳಿ ಬೀಸಿ ಕಮಂಡಲ ಉರುಳಿ ಅದರಲ್ಲಿ ಜಲರೂಪಿಯಾಗಿದ್ದ ಕಾವೇರಿಯು ನದಿಯಾಗಿ ಹರಿದಳೆಂದು ಹೇಳಿದರೆ ಮತ್ತೊಂದು ಕತೆಯಲ್ಲಿ ಶೂರಪದ್ಮನೆಂಬ ಅಸುರನು ತನ್ನ ವಿಶೇಷ ಶಕ್ತಿಯಿಂದ ಮಳೆ ಬೀಳುವುದನ್ನು ತಡೆದನಂತೆ. ಇದರಿಂದ ದಕ್ಷಿಣ ಭಾರತದಲ್ಲಿ ಹಾಹಾಕಾರವಾಗಲು ಇಂದ್ರನ ಪ್ರಾರ್ಥನೆಯಂತೆ ಗಣೇಶನು ಕಾಗೆಯ ರೂಪ ತಳೆದು ಕವೇರ ಋಷಿಯ ಕಮಂಡಲುವನ್ನು ಕೆಡವಿ ಕಾವೇರಿಯ ಜಲರೂಪಕ್ಕೆ ಕಾರಣನಾದನೆಂದು ಹೇಳುತ್ತಾರೆ. ಕೊಡಗಿನ ಕಾವೇರಿ ಪುರಾಣ ದಲ್ಲಿನ ಕಾವೇರಿ ಮಾತೆ ಕಥೆಯನ್ನು ಕೊಡವ ಹಾಡಿನಲ್ಲಿ ಸವಿವರವಾಗಿ ರಚಿಸಲಾಗಿದೆ.

ಕೊಡವ ಜನಾಂಗದ ಪಾಲಿನ ಕುಲದೇವಿ ಕಾವೇರಿ ಮಾತೆಯು ಕೊಡಗಿನ ತಲಕಾವೇರಿ, ಭಾಗಮಂಡಲದಲ್ಲಿ ನದಿಯಾಗಿ ಹರಿದು ಬಲಮುರಿಗೆ ಬರುವಾಗ ಒಮ್ಮೆಗೆ ತನ್ನ ಪ್ರವಾಹದ ದಿಕ್ಕನ್ನು ಬದಲಾಯಿಸುತ್ತಾಳೆ. ಆ ಸಮಯದಲ್ಲಿ ಅಲ್ಲಿದ್ದ ಕೊಡವ ಹೆಂಗಸರ ಸೀರೆಯ ಮುಂದೆಯಿದ್ದ ನೆರಿಗೆಯು ನೀರಿನ ರಭಸಕ್ಕೆ ಹಿಂದಕ್ಕೆ ತಿರುಗಿತಂತೆ. ಅಲ್ಲಿಂದ ಕೊಡವ ಮಹಿಳೆಯರು ಸೀರೆ ಉಡುವಾಗ ನೆರಿಗೆಯನ್ನು ಹಿಂದಕ್ಕೆ ಹಾಕುವ ಬಗ್ಗೆ ಪ್ರತೀತಿ ಇದೆ ಎನ್ನುತ್ತಾರೆ.

ಕೊಡಗಿನವರು ಕಾವೇರಿ ಮಾತೆಯನ್ನು ನಂಬುತ್ತಾ ಬರುತಿದ್ದು ಉಗಮ ಸ್ಥಾನವಾದ ಪವಿತ್ರನೆಲೆ ತಲಕಾವೇರಿಯಲ್ಲಿ ವರ್ಷದ ಹಲವು ಬಾರಿ ವಿಶೇಷ ಪೂಜಾದಿ ಉತ್ಸವಗಳನ್ನು ನಡೆಸಿಕೊಂಡು ಬರುತಿದ್ದು ಪ್ರತೀ ವರ್ಷದ ಅಕ್ಟೋಬರ್ ತಿಂಗಳ ತುಲಾ (ಸಂಕ್ರಮಣ) ಮಾಸದಲ್ಲಿ ಕಾವೇರಿ ಜಾತ್ರೆಯು ನಡೆಯಲಿದ್ದು ಜ್ಯೋತಿಷ್ಯ ಶಾಸ್ತçದ ರೀತಿ ನಿಶ್ಚಿತವಾದ ತುಲಾ ಮುಹೂರ್ತದಲ್ಲೇ ಕುಂಡಿಕೆಯಿAದ ತೀರ್ಥೋದ್ಭವವಾಗುವುದೇ ವಿಶೇಷ. ಮುಹೂರ್ತ ಸಮಯವು ಸಮೀಪಿಸಿದಂತೆ ಅರ್ಚಕರು ಶ್ರೀ ಕಾವೇರಿ ಕುಂಡಿಕೆಯಲ್ಲಿ ಶ್ರೀ ಕಾವೇರಿ ಮಾತೆಗೆ ಮಂಗಳ ಘೋಷಗಳ ನಡುವೆ ಮಹಾಸಂಕಲ್ಪ ಪೂಜೆ, ಸಹಸ್ರನಾಮಾರ್ಚನೆ, ಮಂತ್ರೋಕ್ತವಾಗಿ ವಿಧಿಪೂರ್ವಕ ವಾಗಿ ಮಹಾ ಮಂಗಳಾರತಿ ಮಾಡುವ ಮೂಲಕ ಕೃಪಾಶೀರ್ವಾದವನ್ನು ಕೋರುತ್ತಾರೆ. ಆ ಹೊತ್ತಿಗಾಗಲೇ ತೀರ್ಥ ಕುಂಡಿಕೆಯಿAದ ಪವಿತ್ರ ಜಲವು ಮೇಲುಕ್ಕಿ ಬರುತ್ತದೆ.

ದೇವಿ ಪವಾಡದ ವಿಸ್ಮಯ ಕುಂಡಿಕೆ...

ಅರ್ಚಕರು ಜಲರೂಪಿಣಿ ಕಾವೇರಿ ಮಾತೆಯ ಕುಂಡಿಕೆಗೆ ಆರತಿಯನ್ನು ಬೆಳಗಿ ಪುಣ್ಯ ತೀರ್ಥವನ್ನು ಕುಂಡಿಕೆಯಿAದ ತೆಗೆದು ನೆರೆದಿದ್ದ ಭಕ್ತ ಸಮೂಹದ ಮುಂದೆ ಎರಚುತಿದ್ದಂತೆ ಭಕ್ತ ಸಮೂಹ ಜೈ.. ಜೈ.. ಮಾತಾ.. ಕಾವೇರಿ ಮಾತಾ... ಎನ್ನುತ್ತಾ ತೀರ್ಥ ಕುಂಡಿಕೆಯಿAದ ಮೇಲುಕ್ಕಿ ಬರುವ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳುತ್ತಾರೆ. ಕುಂಡಿಕೆಯಿAದ ಅದೆಷ್ಟೇ ತೀರ್ಥ ತೆಗೆದರೂ ಪವಿತ್ರ ಕುಂಡಿಕೆಯಲ್ಲಿ ತೀರ್ಥ ಕಡಿಮೆಯಾಗುವುದೇ ಇಲ್ಲ. ತಲಕಾವೇರಿಯಲ್ಲಿ ತೀರ್ಥೋದ್ಭವ ಹಾಗೂ ಅಕ್ಷಯ ತೀರ್ಥ ಪ್ರತಿವರ್ಷ ಕಂಡುಬರುವ ದೈವಿಕ ಪವಾಡದ ವಿಸ್ಮಯಕಾರಿ ದೃಶ್ಯವೆಂದೇ ಹೇಳಲಾಗುತ್ತಿದೆ. ಇದರಲ್ಲಿ ಪ್ರಕೃತಿಯ ರಹಸ್ಯ ಅಡಗಿದೆ. ಸಾವಿರ ಕೊಡದಲ್ಲಿ ನೀರು ತೆಗೆದರೂ ಪುಟ್ಟ ಕುಂಡಿಕೆಯಲ್ಲಿ ತೀರ್ಥ ಬತ್ತುವುದೇ ಇಲ್ಲ.

ಕೆಲವು ವರ್ಷಗಳಿಂದ ಕೊಡವ ಜನಾಂಗದ ಹಿರಿಯ ಹಾಗೂ ಕಿರಿಯ ಹಾಡುಗಾರರು ದುಡಿಕೊಟ್ಟ್ ಹಾಡಿನೊಂದಿಗೆ ತಲಕಾವೇರಿಗೆ ಬಂದು ಕಾವೇರಿ ಮಾತೆಯ ಹಾಡನ್ನು ತೀರ್ಥೋದ್ಭವದವರೆಗೆ ಹಾಡಿದರೆ ಕೊಡವ ಯುವಕ ಯುವತಿಯರ ತಂಡ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ದುಡಿಕೊಟ್ಟ್ನ ಹಾಡಿನೊಂದಿಗೆ ಪಾದಯಾತ್ರೆಯ ಮೂಲಕ ತಲಕಾವೇರಿಗೆ ತಲುಪಿ ಪುಣ್ಯ ತೀರ್ಥವನ್ನು ವಿವಿಧೆಡೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಲಿದ್ದಾರೆ.

ಕಾವೇರಿ ಜಾತ್ರೆಯಲ್ಲಿ ಸಾವಿಗಟ್ಟಲೆ ಕೊಡವರ ಕುಲದೇವರೆಂದು ಪ್ರಾರ್ಥಿಸುವ ಕೊಡವರು, ಗೌಡಜನಾಂಗ, ಮೂಲಜನಾಂಗ ಹಾಗೂ ಹೊರ ಜಿಲ್ಲೆಗಳ ಭಕ್ತ ಸಮೂಹ ಸೇರಿ ಕಾವೇರಿ ತೀರ್ಥ ಸ್ಥಾನ, ಪೂಜಾ ಸೇವೆಗಳನೆಲ್ಲ ಪೂರೈಸಿ ಪವಿತ್ರ ತೀರ್ಥವನ್ನು ಮನೆಗಳಿಗೆ ತರುತ್ತಾರೆ. ಪುರಾಣ ಕಥೆಗಳಲ್ಲಿ ಹೇಳುವಂತೆ ಯಾರು ಕಾವೇರಿಯ ಪರಮ ಪವಿತ್ರವಾದ ತೀರ್ಥದಲ್ಲಿ ಸ್ನಾನ ಮಾಡುವರೋ ಅವರ ಜನ್ಮ ಜನ್ಮಾಂತರಗಳ ಪಾಪಗಳೆಲ್ಲ ಕಳೆದು ಹೋಗುವುದು, ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ತೀರ್ಥೋದ್ಭವದ ಸಮಯದಲ್ಲಿ ತೀಥ ಸ್ನಾನ ಮಾಡುವುದರಿಂದ ಆಶ್ವಮೇಧಯಾಗ ಫಲವು ದೊರೆಯುವುದು. ಕಾವೇರಿ ಜಲದಲ್ಲಿ ಒಂದು ತಿಂಗಳು ಎಡೆಬಿಡದೆ ಸ್ನಾನ ಪೂಜಾದಿ ಕೈಂಕರ್ಯವನ್ನು ಮಾಡುವು ದರಿಂದಲೂ ಮಂಗಳಕರ ದಿವ್ಯಗತಿ ಹೊಂದುವರೆAಬ ಪುರಾತನ ಕಾಲದ ನಂಬಿಕೆಯೂ ಇಂದು ಕಾಣಬರುತ್ತಿದೆ.

ತಲಕಾವೇರಿಗೆ ಹೋಗಲು ಸಾಧ್ಯವಾಗದವರು ಹರಿಶ್ಚಂದ್ರ, ಬಲಮುರಿ ಹಾಗೂ ಗುಹ್ಯ ಮೊದಲಾದ ಸ್ಥಳಗಳಿಗೆ ಹೋಗಿ ಕಾವೇರಿ ನದಿಯಲ್ಲಿ ಮಿಂದು ಪೂಜೆ ಸಲ್ಲಿಸುವರು.

ಬೊತ್ತ್ಕುತ್ತುವ ಸಂಪ್ರದಾಯ...

ಕಾವೇರಿ ಸಂಕ್ರಮಣದ ದಿನದ ಮುಂಚಿತವಾಗಿ ಬೊತ್ತ್ ಎಂಬ ಒಂದು ತರಹದ ವಿಶಿಷ್ಟ ರೀತಿಯ (ಪೊಂಗ) ಮರದ ದಂಟನ್ನು ತರಲು ಕಾಡಿಗೆ ಹೋಗಿ ತಮಗೆ ಬೇಕಾದಷ್ಟು ಬೊತ್ತ್ ಹಾಗೂ ಅದಕ್ಕೆ ಸಂಬAಧಿಸಿದ ಬಳ್ಳಿಯನ್ನು ತರುತ್ತಾರೆ. ಅದನ್ನು ಸಿದ್ಧಪಡಿಸಿ ತಲಕಾವೇರಿಯಲ್ಲಿ ತೀರ್ಥೋದ್ಭವ ವಾಗುವದಕ್ಕೆ ಮುಂಚಿತ ದಿನ ತಮ್ಮ ತಮ್ಮ ಗದ್ದೆ, ಮನೆ, ಬಾವಿ, ದನದ ಕೊಟ್ಟಿಗೆ, ಹಟ್ಟಿ, ಕೆರೆಗಳಲೆಲ್ಲ ಒಂದೊAದು ಬೊತ್ತನ್ನು ಚುಚ್ಚಿ ಅದಕ್ಕೆ ತೆಕ್ಕೆಯಂತೆ ಮಾಡಿದ ಬಳ್ಳಿಯನ್ನು ತುದಿಗೆ ಸಿಲುಕ್ಕಿಸುತ್ತಾರೆ. ಕೆಲವೊಂದು ಕಡೆಗಳಲ್ಲಿ ಬಿದಿರನ್ನು ಒಡೆದು ಎರಡು ತುಂಡುಗಳನ್ನು ಕತ್ತರಿ ರೂಪದಲ್ಲಿ ನಿಲ್ಲಿಸಿ ಬಳ್ಳಿಗಳನ್ನು ಹಾಕಿದರೆ. ಕೆಲವೆಡೆ ಕಾಂಡಗಳನ್ನು ಚುಚ್ಚುವ ಕ್ರಮವಿದೆ ಹಾಗೂ ಮತ್ತೆ ಕೆಲವೆಡೆ ಬೊತ್ತನ್ನೆ ಚುಚ್ಚುವುದಿಲ್ಲ.

ಈ ಬೊತ್ತು ಚುಚ್ಚುವ ಬಗ್ಗೆ ಹಿರಿಯರು ಹೇಳುವ ಪ್ರಕಾರ ದ್ವಾಪರ ಯುಗದಲ್ಲಿ ಪಾಂಡವರು ವನವಾಸಕ್ಕೆ ಹೋಗುವ ಸಮಯ ದಲ್ಲಿ ಕಾವೇರಿ ಮಾತೆಗೆ ನೀಡಿದ ಜಾಗವನ್ನು ಕಾವೇರಿ ಸಂಕ್ರಮಣದ ಸಮಯದಲ್ಲಿ ಹಿಂದಿರುಗಿ ಬರುವಾಗ ವಾಪಾಸು ಕೇಳಿದರಂತೆ. ಆ ಸಮಯದಲ್ಲಿ ಕೊಡವರು ಜಾಗವನ್ನೆಲ್ಲ ಉಳುಮೆ ಮಾಡಿ ಬೊತ್ತು ಚುಚ್ಚಿ ಜಾಗವನ್ನು ತಮ್ಮದಾಗಿಸಿಕೊಂಡಿದ್ದರ ಫಲವಾಗಿ ಬೊತ್ತ್ ಚುಚ್ಚುವ ಸಂಪ್ರದಾಯ ವಿದೆನ್ನುವರು. ಮತ್ತೆ ಕೆಲವರ ಪ್ರಕಾರ ಪಾಂಡವರು ವನವಾಸಕ್ಕೆ ಹೋಗುವಾಗ ತಮ್ಮ ಗುರುತಿಗಾಗಿ ತಮ್ಮ ಕೈಗೆಸಿಕ್ಕ ಗಿಡ, ಮರ, ಬಳ್ಳಿಗಳನ್ನು ಚುಚ್ಚಿದರಂತೆ. ಅದೇ ಬೊತ್ತ್ ಎಂದೆನಿಸಿಕೊAಡಿ ತೆನ್ನುವರು. ಹಿಂದೊಮ್ಮೆ ಬೊತ್ತ್ ತರಲು ಹೋದ ಕೆಲಸದವನ್ನು ಹುಲಿ ಹಿಡಿದಿದ್ದರಿಂದ ಆ ಊರಿನವರು ಬೊತ್ತಿನ ಬದಲಾಗಿ ಕಾಂಡವನ್ನು ಚುಚ್ಚುತ್ತಾರೆಂಬ ಪ್ರತೀತಿ ಇದೆ.

ಕಣಿ ಪೂಜೋ ಆಚರಣೆ...

ಉತ್ಸವದ ಮುಂಚಿತವಾಗಿ ಪತ್ತಾಯಕ್ಕೆ ಅಕ್ಕಿ ಹಾಕುವ ಸಂಪ್ರದಾಯ, ಆಜ್ಞಾ ಮುಹೂರ್ತ ನೆರವೇರಲಿದ್ದು, ಅಕ್ಷಯ ಪಾತ್ರೆ ಇರಿಸುವುದು, ಭಂಡಾರ ತರುವ ಬೊತ್ತ್ಕುತ್ತುವ ಸಂಪ್ರದಾಯ...

ಕಾವೇರಿ ಸಂಕ್ರಮಣದ ದಿನದ ಮುಂಚಿತವಾಗಿ ಬೊತ್ತ್ ಎಂಬ ಒಂದು ತರಹದ ವಿಶಿಷ್ಟ ರೀತಿಯ (ಪೊಂಗ) ಮರದ ದಂಟನ್ನು ತರಲು ಕಾಡಿಗೆ ಹೋಗಿ ತಮಗೆ ಬೇಕಾದಷ್ಟು ಬೊತ್ತ್ ಹಾಗೂ ಅದಕ್ಕೆ ಸಂಬAಧಿಸಿದ ಬಳ್ಳಿಯನ್ನು ತರುತ್ತಾರೆ. ಅದನ್ನು ಸಿದ್ಧಪಡಿಸಿ ತಲಕಾವೇರಿಯಲ್ಲಿ ತೀರ್ಥೋದ್ಭವ ವಾಗುವದಕ್ಕೆ ಮುಂಚಿತ ದಿನ ತಮ್ಮ ತಮ್ಮ ಗದ್ದೆ, ಮನೆ, ಬಾವಿ, ದನದ ಕೊಟ್ಟಿಗೆ, ಹಟ್ಟಿ, ಕೆರೆಗಳಲೆಲ್ಲ ಒಂದೊAದು ಬೊತ್ತನ್ನು ಚುಚ್ಚಿ ಅದಕ್ಕೆ ತೆಕ್ಕೆಯಂತೆ ಮಾಡಿದ ಬಳ್ಳಿಯನ್ನು ತುದಿಗೆ ಸಿಲುಕ್ಕಿಸುತ್ತಾರೆ. ಕೆಲವೊಂದು ಕಡೆಗಳಲ್ಲಿ ಬಿದಿರನ್ನು ಒಡೆದು ಎರಡು ತುಂಡುಗಳನ್ನು ಕತ್ತರಿ ರೂಪದಲ್ಲಿ ನಿಲ್ಲಿಸಿ ಬಳ್ಳಿಗಳನ್ನು ಹಾಕಿದರೆ. ಕೆಲವೆಡೆ ಕಾಂಡಗಳನ್ನು ಚುಚ್ಚುವ ಕ್ರಮವಿದೆ ಹಾಗೂ ಮತ್ತೆ ಕೆಲವೆಡೆ ಬೊತ್ತನ್ನೆ ಚುಚ್ಚುವುದಿಲ್ಲ.

ಈ ಬೊತ್ತು ಚುಚ್ಚುವ ಬಗ್ಗೆ ಹಿರಿಯರು ಹೇಳುವ ಪ್ರಕಾರ ದ್ವಾಪರ ಯುಗದಲ್ಲಿ ಪಾಂಡವರು ವನವಾಸಕ್ಕೆ ಹೋಗುವ ಸಮಯ ದಲ್ಲಿ ಕಾವೇರಿ ಮಾತೆಗೆ ನೀಡಿದ ಜಾಗವನ್ನು ಕಾವೇರಿ ಸಂಕ್ರಮಣದ ಸಮಯದಲ್ಲಿ ಹಿಂದಿರುಗಿ ಬರುವಾಗ ವಾಪಾಸು ಕೇಳಿದರಂತೆ. ಆ ಸಮಯದಲ್ಲಿ ಕೊಡವರು ಜಾಗವನ್ನೆಲ್ಲ ಉಳುಮೆ ಮಾಡಿ ಬೊತ್ತು ಚುಚ್ಚಿ ಜಾಗವನ್ನು ತಮ್ಮದಾಗಿಸಿಕೊಂಡಿದ್ದರ ಫಲವಾಗಿ ಬೊತ್ತ್ ಚುಚ್ಚುವ ಸಂಪ್ರದಾಯ ವಿದೆನ್ನುವರು. ಮತ್ತೆ ಕೆಲವರ ಪ್ರಕಾರ ಪಾಂಡವರು ವನವಾಸಕ್ಕೆ ಹೋಗುವಾಗ ತಮ್ಮ ಗುರುತಿಗಾಗಿ ತಮ್ಮ ಕೈಗೆಸಿಕ್ಕ ಗಿಡ, ಮರ, ಬಳ್ಳಿಗಳನ್ನು ಚುಚ್ಚಿದರಂತೆ. ಅದೇ ಬೊತ್ತ್ ಎಂದೆನಿಸಿಕೊAಡಿ ತೆನ್ನುವರು. ಹಿಂದೊಮ್ಮೆ ಬೊತ್ತ್ ತರಲು ಹೋದ ಕೆಲಸದವನ್ನು ಹುಲಿ ಹಿಡಿದಿದ್ದರಿಂದ ಆ ಊರಿನವರು ಬೊತ್ತಿನ ಬದಲಾಗಿ ಕಾಂಡವನ್ನು ಚುಚ್ಚುತ್ತಾರೆಂಬ ಪ್ರತೀತಿ ಇದೆ.

ಕಣಿ ಪೂಜೋ ಆಚರಣೆ...

ಉತ್ಸವದ ಮುಂಚಿತವಾಗಿ ಪತ್ತಾಯಕ್ಕೆ ಅಕ್ಕಿ ಹಾಕುವ ಸಂಪ್ರದಾಯ, ಆಜ್ಞಾ ಮುಹೂರ್ತ ನೆರವೇರಲಿದ್ದು, ಅಕ್ಷಯ ಪಾತ್ರೆ ಇರಿಸುವುದು, ಭಂಡಾರ ತರುವ ಸಂಪ್ರದಾಯವಿದೆ. ತೀರ್ಥೋದ್ಭವವಾದ ಮಾರನೆಯ ದಿನ ಕಣಿ ಪೂಜೊ ಎಂಬ ಸಾಂಪ್ರದಾಯಿಕ ಕೈಂಕರ್ಯವಿದೆ. ಬೆಳಿಗ್ಗೆ ಮನೆಯವರೆಲ್ಲ ಮನೆಯನ್ನು ಶುಭ್ರಗೊಳಿಸಿ ಸ್ನಾನ ಮಾಡಿ ಮನೆಯ ಮುತ್ತೆöÊದೆಯರು ನೆಲ್ಲಕ್ಕಿ ಬೊಳ್‌ಚ (ದೀಪ) ಬೆಳಗಿ ರೇಷ್ಮೆ ವಸ್ತçವನಿಟ್ಟು ಸೌತೆಕಾಯಿ ಅಥವಾ ತರಕಾರಿಯೊಂದಕ್ಕೆ ತಲೆ-ಕಾಲು ಮಾಡಿ ಹೂವಿ ನಿಂದ ಶೃಂಗರಿಸಿ ಅದಕ್ಕೆ ಆಭರಣವನ್ನು ತೊಡಿಸಿ ಕಾವೇರಿ ಮಾತೆಯ ಪ್ರತೀಕವನ್ನು ಮಾಡಿ ಅದಕ್ಕೆ ಮೂರು ಎಲೆ, ಮೂರು ಅಡಿಕೆಯನ್ನಿಟ್ಟು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟರೆ ಮತ್ತೆ ಕೆಲವರು ಮನೆಗಳಲ್ಲಿ ಕಾವೇರಿ ಮಾತೆಯ ಚಿತ್ರಕ್ಕೆ ಹೂವನ್ನಿಟ್ಟು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ.

ಅಂದು ಬೆಳಗಿನಜಾವ ಬೊತ್ತ್ಪುಟ್ಟ್ ಬೆಪ್ಪ ಪದ್ಧತಿಯಂತೆ ಮನೆಯ ಗಂಡಸರು ಕೊಡಿಬಾಳೆಲೆ (ಬಾಳೆಲೆಯ ತುದಿಭಾಗ)ಯಲ್ಲಿ ಮನೆಯಲ್ಲಿ ಮಾಡಿದ ದೋಸೆ ಹಿಟ್ಟನ್ನು ಗದ್ದೆಯಲ್ಲಿಟ್ಟಂತ ಬೊತ್ತಿನ ಮೇಲೆ ಇಟ್ಟು ದೇವರನ್ನು ನೆನೆಯುವರು. ಆ ಸಮಯದಲ್ಲಿ ಕೆಲಸದವರು ಬಂದು ಇಟ್ಟಂತ ದೋಸೆ ಹಿಟ್ಟನ್ನು ಸೇವಿಸುವರು. ಕುಟುಂಬದವರು ಕೈಮಡಕ್ಕೆ ಹೋಗಿ ಅಕ್ಕಿ ಹಾಕಿ ನಮಸ್ಕರಿಸಿ ಮನೆಗೆ ಬಂದು ಪೂಜಿಸಲ್ಪಟ್ಟ ಕಾವೇರಿ ಮಾತೆಗೂ ನೆಲ್ಲಕ್ಕಿ ದೀಪಕ್ಕೂ ಮನೆಯ ಮುಂದಿನ ಕನ್ನಿಕಂಬಕ್ಕೆ ಅಕ್ಕಿ ಹಾಕಿ ನಮಿಸಿ ಹಿರಿಯರ ಆರ್ಶೀವಾದ ಪಡೆಯುವ ಸಂಪ್ರದಾಯವಿದೆ.

ಈ ವರ್ಷ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಅಕ್ಟೋಬರ್ ೧೭ ರ ಬೆಳಿಗ್ಗೆ ೭ ಗಂಟೆ ೪೦ ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಕಾವೇರಿ ತುಲಾ ಸಂಕ್ರಮಣ ದಿನ ಕಾವೇರಿ ಮಾತೆಯು ತೀರ್ಥ ರೂಪಿಣಿ ಯಾಗಿ ಬಂದು ನಾಡಿನ ಸಮಸ್ತರಿಗೆ ಒಳಿತು ಮಾಡಲಿದ್ದಾಳೆ.

- ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ.