ಗುಡ್ಡೆಹೊಸೂರು, ಅ. ೧೬ : ತುಲಾ ಸಂಕ್ರಮಣದ ಅಂಗವಾಗಿ ತಲಕಾವೇರಿಯಲ್ಲಿ ನಡೆಯುವ ಅನ್ನಸಂತರ್ಪಣೆ ಕಾರ್ಯಕ್ಕೆ ಪುಣ್ಯಭೂಮಿ ಕೊಡಗು ತಂಡದ ಸದಸ್ಯರಿಂದ ಹಾರಂಗಿ ಸಮೀಪದ ಹುದುಗೂರು ಗ್ರಾಮ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಿಂದ ತರಕಾರಿ, ಅಕ್ಕಿ, ತೆಂಗಿನಕಾಯಿ ಸೇರಿದಂತೆ ಒಂದು ಪಿಕ್‌ಆಪ್‌ನಷ್ಟು ಸಾಮಗ್ರಿಗಳನ್ನು ತಲಕಾವೇರಿಗೆ ಸಾಗಿಸಲಾಯಿತು.