ಮಡಿಕೇರಿ, ಅ. ೧೭: ನಗರದ ಐತಿಹಾಸಿಕ ಶ್ರೀ ಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿ ವತಿಯಿಂದ ತಾ. ೨೬ ರಂದು ದೇವಾಲಯದ ಆವರಣದಲ್ಲಿ ಶಾಂತಿಪೂಜೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ವಿ. ಅರವಿಂದ್ ತಿಳಿಸಿದ್ದಾರೆ.

೪೮ನೇ ವರ್ಷದ ಶ್ರೀ ಕೋಟೆ ಮಹಾಗಣಪತಿ ದಸರಾ ಉತ್ಸವದಲ್ಲಿ ಎಲ್ಲರ ಸಹಕಾರದಿಂದ ಮಂಟಪದ ಶೋಭಾಯಾತ್ರೆ ಯಶಸ್ವಿಯಾಗಿದ್ದು, ಪ್ರಥಮ ಬಹುಮಾನ ಬಂದಿದೆ. ಶನಿವಾರ ಸಂಜೆ ೭ ಗಂಟೆಗೆ ನಡೆಯುವ ಶಾಂತಿಪೂಜೆಯಲ್ಲಿ ಸರ್ವ ಭಕ್ತರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.