ಕೂಡಿಗೆ, ಅ. ೧೭: ಹೆಬ್ಬಾಲೆ ಪ್ರೌಢಶಾಲೆಯಲ್ಲಿ ೧೯೮೮-೯೧ರ ಅವಧಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಸಂಯೋಜಕ ನಾಪಂಡ ಮುತ್ತಪ್ಪ ಚಾಲನೆ ನೀಡಿದರು. ಸ್ನೇಹ ಸಮ್ಮಿಲನದ ಮೂಲಕ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು.

ಈ ಸಂದರ್ಭ ನಾಪಂಡ ಮುದ್ದಪ್ಪ ಪ್ರಾಸ್ತಾವಿಕ ನುಡಿಯಾಡಿದರು. ಅಗಲಿದ ಸಹಪಾಠಿಗಳಿಗೆ ನುಡಿನಮನ ಸಲ್ಲಿಕೆ ಸೇರಿದಂತೆ ಪರಸ್ಪರ ಸಂವಾದ ಹಾಗೂ ವಿವಿಧ ಕಾರ್ಯಕ್ರಮಗಳು ನಡೆದವು. ಪುಟ್ಟೇಗೌಡ ಸ್ವಾಗತಿಸಿ, ಗೀತಾ ಪ್ರಾರ್ಥಿಸಿದರು. ಹೆಚ್.ಪಿ. ಉದಯ ಕುಮಾರ್ ವಂದಿಸಿದರು. ಹೆಚ್.ಜಿ. ಕುಮಾರ್ ಮತ್ತು ಎನ್. ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.