ನಾಪೋಕ್ಲು, ಅ. ೧೯: ಉತ್ತರ ಕನ್ನಡದ ಶಿರಸಿ ಬಳಿಯ ಇತಿಹಾಸ ಪ್ರಸಿದ್ದ ಸೋಂದೆಯಲ್ಲಿ ಶನಿವಾರ ಉದ್ಘಾಟನೆಗೊಂಡ ೭ನೇ ಇತಿಹಾಸ ಉತ್ಸವದಲ್ಲಿ ಕೊಡಗಿನ ಪ್ರತಿನಿಧಿಯಾಗಿ ಭಾಗವಹಿಸಿದ್ದ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಕಾವೇರಿ ತೀರ್ಥವನ್ನು ಸೋಂದಾ ಸ್ವರ್ಣವಲ್ಲಿ ಶ್ರೀಗಳು ಮತ್ತು ಜೈನ ಮಠಾಧಿಪತಿಗಳು ಸೇರಿದಂತೆ ಗಣ್ಯರಿಗೆ ವಿತರಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮ ಆಯೋಜಕರು ಹಾಗೂ ಖ್ಯಾತ ಇತಿಹಾಸಕಾರರಾದ ಲಕ್ಷ್ಮೀಶ್ ಹೆಗಡೆ ಸೋಂದಾ ಅವರು, ಕೊಡಗಿನ ಕಾವೇರಿಗೂ ಸೋಂದಾ ಸಂಸ್ಥಾನಕ್ಕೂ ಐತಿಹಾಸಿಕವಾದ ಸಂಬAಧವಿದ್ದು, ಪುರಾತನ ಕಾಲದಲ್ಲಿ ಸೋಂದೆಯಿAದ ಕಾವೇರಿಯ ಪೂಜೆಗೆ ತೆಂಗಿನಕಾಯಿ ಕಳುಹಿಸುತ್ತಿತ್ತು. ತುಲಾ ಸಂಕ್ರಮಣದ ಮಾರನೇ ದಿನ ಸೋಂದಾಕ್ಕೆ ಕಾವೇರಿಯ ತೀರ್ಥ ಬರುವ ಸಂಪ್ರದಾಯವಿತ್ತು. ಆದರೆ ಇಂದು ಮತ್ತೆ ಇತಿಹಾಸ ಮರುಕಳಿಸಿದ್ದು, ತುಲಾ ಸಂಕ್ರಮಣದ ಮಾರನೇ ದಿನವೇ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಕೊಡವ ಉಡುಪಿನಲ್ಲಿ ತೀರ್ಥದೊಂದಿಗೆ ಬಂದಿದ್ದು, ಹಿಂದಿನ ಸಂಪ್ರದಾಯ ಮರುಕಳಿಸಲು ಈ ವೇದಿಕೆ ಸಾಕ್ಷಿ ಆಗಿದೆ ಎಂದರು. ಕಾವೇರಿ ತವರಿನಿಂದ ಆಕೆಯ ನಾಡಿನ ಇತಿಹಾಸವನ್ನು ಹಂಚಿಕೊಳ್ಳಲು ಅವಕಾಶ ಸಿಕ್ಕಿ ಕಾವೇರಿ ತೀರ್ಥವನ್ನು ಉದ್ಘಾಟನಾ ವೇದಿಕೆಗೆ ತಂದು, ಇತಿಹಾಸ ಮರುಸೃಷ್ಟಿಗೆ ನಾಂದಿ ಹಾಡಿÀದ್ದು ಹರ್ಷ ಮೂಡಿಸಿದೆ ಎಂದು ಚಾಮೆರ ದಿನೇಶ್ ಬೆಳ್ಯಪ್ಪ ಹರ್ಷ ವ್ಯಕ್ತಪಡಿಸಿದರು. ನೆರೆದಿದ್ದ ಅತಿಥಿಗಳಾದಿಯಾಗಿ ಸರ್ವರೂ ತೀರ್ಥ ಸ್ವೀಕರಿಸುವ ಮೂಲಕ ತಾಯಿ ಕಾವೇರಿಗೆ ನಮಿಸಿದರು.

- ದುಗ್ಗಳ ಸದಾನಂದ.