ಶನಿವಾರಸಂತೆ, ಅ. ೧೯: ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಗುರುವಾರ ಮಾಸಿಕ ಸಂಕ್ರಮಣ ಪೂಜೆ ಹಾಗೂ ಕಾವೇರಿ ಸಂಕ್ರಮಣ ಪೂಜಾ ಆರಾಧನೆ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು.

ಬನದಲ್ಲಿ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವವನ್ನು ಹೂವುಗಳಿಂದ ಅಲಂಕರಿಸಿ, ಸೀಯಾಳ, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿ, ಪೂಜಿಸಿದರು. ಅರ್ಚಕರಾದ ಸಂತೋಷ್ ಕರ್ಕೇರ ಹಾಗೂ ಪ್ರಕಾಶ್ಚಂದ್ರ ಸುವರ್ಣ ಪೂಜಾವಿಧಿ ನೆರವೇರಿಸಿದರು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಮಹಾ ಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ನಡೆಯಿತು.