ವೀರಾಜಪೇಟೆ, ಅ. ೧೯: ವೀರಾಜಪೇಟೆ ಹಿಂದೂ ಅಗ್ನಿದಳ ಹಾಗೂ ವಿ ಫ್ರೆಂಡ್ಸ್ ಸಂಸ್ಥೆ ವತಿಯಿಂದ ಪವಿತ್ರ ಕಾವೇರಿ ತೀರ್ಥ ವಿತರಣೆ ನಡೆಯಿತು.

ತಾ. ೧೭ ರಂದು ಬೆಳಿಗ್ಗೆ ತಲಕಾವೇರಿಯಲ್ಲಿ ತೀರ್ಥೋದ್ಭವದ ಬಳಿಕ ಪವಿತ್ರ ತೀರ್ಥವನ್ನು ತಲಕಾವೇರಿಯಿಂದ ವೀರಾಜಪೇಟೆಗೆ ತಂದು ವೀರಾಜಪೇಟೆ ನಗರದೆಲ್ಲೆಡೆ ಹಾಗೂ ಎಲ್ಲಾ ಮನೆಗಳಿಗೆ ಕಾವೇರಿ ತೀರ್ಥವನ್ನು ವಿತರಿಸಲಾಯಿತು. ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.