ಸಿದ್ದಾಪುರ, ಅ. ೧೯: ಗೋದಾಮಿನಲ್ಲಿರಿಸಿದ್ದ ಕರಿಮೆಣಸು ತುಂಬಿದ್ದ ಚೀಲಗಳು ಕಳವಾದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ಪಾಲಿಬೆಟ್ಟ ಸಮೀಪದ ಬೀಚ್ ಲ್ಯಾಂಡ್ ಕಾಫಿ ತೋಟದಲ್ಲಿ ತಲಾ ೬೦ ಕೆ.ಜಿ. ತೂಕದ ಒಟ್ಟು ೩೭ ಚೀಲ ಕರಿಮೆಣಸನ್ನು ಎಸ್ಟೇಟಿನ ಗೋದಾಮಿನಲ್ಲಿರಿಸಲಾಗಿತ್ತು. ಕಳೆದ ಸೋಮವಾರದಂದು ಎಸ್ಟೇಟ್ ವ್ಯವಸ್ಥಾಪಕ ಜೋರ್ಡನ್ ಗೋದಾಮನ್ನು ಪರಿಶೀಲಿಸಿದ ಸಂದರ್ಭ ಕರಿಮೆಣಸು ತುಂಬಿದ್ದ ಚೀಲಗಳ ಪೈಕಿ ಆರು ಚೀಲಗಳು ಕಳ್ಳತನವಾಗಿರುವುದು ಕಂಡುಬAದಿದೆ. ಅಲ್ಲದೆ ಗೋದಾಮಿನ ಮೇಲ್ಛಾವಣಿ ತೆಗೆದಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ಎಸ್ಟೇಟಿನ ಮಾಲೀಕರಿಗೆ ಮಾಹಿತಿ ನೀಡಿದ್ದು ಅವರ ಸೂಚನೆಯಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳುವಾದ ೩೬೦ ಕೆ.ಜಿ ತೂಕದ ಒಣಗಿದ ಕರಿಮೆಣಸಿನ ಅಂದಾಜು ಮೌಲ್ಯ ೧,೪೦,೦೦೦ ರೂ. ಎಂದು ಅಂದಾಜಿಸಲಾಗಿದೆ.