ನಾಪೋಕ್ಲು, ಅ. ೨೦: ಕಕ್ಕಬೆ ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ಶ್ರೀ ಕಾವೇರಿ ತೀರ್ಥೋದ್ಭವ ಕಳೆದು ಪವಿತ್ರ ತುಲಾಮಾಸದ ೧೦ನೇ ದಿನದ ಉತ್ಸವವಾದ ಪತ್ತಾಲೋದಿ ಆರಾಧನೋತ್ಸವವನ್ನು ಹಲವು ವರ್ಷ ಗಳಿಂದ ಪರದಂಡ ಕುಟುಂಬಸ್ಥರಿAದ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ತಾ.೨೭ರಂದು ಜರುಗಲಿದೆ. ಈ ಪ್ರಯುಕ್ತ ಪೂಜಾ ಕೈಂಕರ್ಯಗಳು, ಸತ್ಯನಾರಾಯಣ ಪೂಜೆ, ಮಹಾಪೂಜೆ, ತುಲಾಭಾರ ಸೇವೆಗಳು ನಡೆಯಲಿವೆ.