ಶ್ರೀಮಂಗಲ, ಅ. ೧೯: ದಕ್ಷಿಣ ಕೊಡಗಿನ ಬಾಳೆಲೆ ವ್ಯಾಪ್ತಿಯ ದೇವ ನೂರು ಗ್ರಾಮದಲ್ಲಿ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಯ ಸೆರೆಗೆ ನಡೆಸುತ್ತಿರುವ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಹುಲಿಯ ಸುಳಿವು ಪತ್ತೆಯಾಗಿಲ್ಲ. ಅತ್ತ ಶ್ರೀಮಂಗಲ ವ್ಯಾಪ್ತಿಯಲ್ಲಿ ಹುಲಿ ಮತ್ತೆ ಗ್ರಾಮಕ್ಕೆ ನುಸುಳುವ ಬಗ್ಗೆ ಅರಿಯಲು ಬ್ರಹ್ಮಗಿರಿ ಅರಣ್ಯದ ಬೆಟ್ಟದ ಅಂಚಿನಲ್ಲಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ. ಉಭಯ ಸ್ಥಳಗಳಿಗೆ ಶನಿವಾರ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವನೂರು ವ್ಯಾಪ್ತಿಯಲ್ಲಿ ಮತ್ತಿ ಗೋಡು ಸಾಕಾನೆ ಶಿಬಿರದ ಮೃಗಾ ಲಯ ಅಭಿಮನ್ಯು ಮತ್ತು ಅಶೋಕ ಎಂಬ ಎರಡು ಸಾಕಾನೆಗಳನ್ನು ಮತ್ತು ೨೫ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಆನೆ ಚೌಕೂರು ವಲಯ ಅರಣ್ಯ ಅಧಿಕಾರಿ ದೇವರಾಜ್ ಅವರ ನೇತೃತ್ವದಲ್ಲಿ ಎರ ಡನೇ ದಿನದ ಕೂಂಬಿAಗ್ ಕಾರ್ಯಾ ಚರಣೆ ನಡೆಯುತ್ತಿದೆ. ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿ ಕೂಂಬಿAಗ್ ಮಾಹಿತಿ ಪಡೆದರು.

ಶ್ರೀಮಂಗಲ ಸಮೀಪ ನೆಮ್ಮಲೆ ಗ್ರಾಮದಲ್ಲಿ ಹುಲಿ ಕಾರ್ಯಾಚರಣೆ ಸಂದರ್ಭ ಅರಣ್ಯಕ್ಕೆ ಹುಲಿ ಹಿಂದಿರು ಗಿರುವ ಹಿನ್ನೆಲೆ ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿತ್ತು. ಹುಲಿಯ ಚಲನವಲನದ ಬಗ್ಗೆ ಬ್ರಹ್ಮಗಿರಿ ಅಭಯಾರಣ್ಯದ ಅಂಚಿನಲ್ಲಿ ೨೦ ಹುಲಿ ಟ್ರ‍್ಯಾಪ್ ಕ್ಯಾಮರಗಳನ್ನು ಅರಣ್ಯ ಇಲಾಖೆ ಅಳವಡಿಸಿದೆ.

ಈ ಸ್ಥಳದಲ್ಲಿ ಈಗಾಗಲೇ ಸುಮಾರು ೨೦ಕ್ಕೂ ಅಧಿಕ ಸಿಬ್ಬಂದಿ ಗಳು ನಿಗಾವಹಿಸಿದ್ದಾರೆ. ಇದಲ್ಲದೆ ಬ್ರಹ್ಮಗಿರಿ ಅರಣ್ಯದಿಂದ ತೆರಾಲು ಬಿರು ನಾಣಿ ವ್ಯಾಪ್ತಿಯಲ್ಲಿ ಹುಲಿ ಗ್ರಾಮಕ್ಕೆ ನುಸುಳುವ ಸಾಧ್ಯತೆ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದು, ಬ್ರಹ್ಮಗಿರಿ ಅಭಯಾರಣ್ಯದ ಅಂಚಿನಲ್ಲಿ ಹದ್ದಿನ ಕಣ್ಣಿಟ್ಟು ಹುಲಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.ಶ್ರೀಮಂಗಲ ವ್ಯಾಪ್ತಿಯ ಬೀರುಗ ಗ್ರಾಮದ ಪಾಚಿಬೇಲ್ - ಬ್ರಹ್ಮಗಿರಿ ಅಭಯಾರಣ್ಯದ ಅಂಚಿನಲ್ಲಿ ನಡೆಯು ತ್ತಿರುವ ಕಾರ್ಯಾಚರಣೆಯ ನೇತೃತ್ವ ವನ್ನು ಶ್ರೀಮಂಗಲ ವನ್ಯಜೀವಿ ವಲಯ ಅರಣ್ಯಾಧಿಕಾರಿ ಅರವಿಂದ್ ವಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಕೇತ್ ಪೂವಯ್ಯ ಅವರು ಶ್ರೀಮಂಗಲ ವ್ಯಾಪ್ತಿಯ ಅರಣ್ಯದಂಚಿ ನಲ್ಲಿ ಕಾರ್ಯಾಚರಣೆಯಿಂದ ಹುಲಿ ಅರಣ್ಯಕ್ಕೆ ಹಿಂತಿರುಗಿರುವ ಹೆಜ್ಜೆ ಗುರುತನ್ನು ಪರಿಶೀಲಿಸಿದರು. ಇದಲ್ಲದೆ ಮತ್ತೆ ಹುಲಿ ಗ್ರಾಮಕ್ಕೆ ನುಸುಳಿರುವ ಯಾವುದೇ ಸುಳಿವು ಸಿಕ್ಕಿದರೂ, ಕೂಡಲೇ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಈ ಭಾಗ ದಲ್ಲಿಯೂ ಮತ್ತೆ ಆರಂಭಿಸಲಾಗು ವುದು. ಅದಕ್ಕಾಗಿ ಈ ಭಾಗದ ಹುಲಿ ಸೆರೆಯ ಅನುಮತಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭ ಸ್ಥಳೀಯ ಬೆಳೆಗಾರರಾದ ತೀತಿರ ಪ್ರಭು ಸುಬ್ಬಯ್ಯ, ಚೊಟ್ಟೆಯಾಂಡಮಾಡ ವಿಶು, ಚಿಮ್ಮುಣೀರ ವಸಂತ್ ಹಾಜರಿದ್ದರು.