ಮಡಿಕೇರಿ, ಅ. ೧೯: ಚೆನ್ನೆöÊನ ಮದ್ರಾಸ್ ಅಂತರ ರಾಷ್ಟಿçÃಯ ಸರ್ಕ್ಯೂಟ್‌ನಲ್ಲಿ ಇತ್ತೀಚೆಗೆ ನಡೆದ ೨೦೨೪ರ ಎಮ್.ಆರ್.ಎಫ್ ಎಮ್.ಎಮ್.ಎಸ್.ಸಿ ಎಫ್.ಎಮ್.ಎಸ್.ಸಿ.ಐ ಭಾರತೀಯ ರಾಷ್ಟಿçÃಯ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ತಸ್ಮಯ್ ಕಾರ್ಯಪ್ಪ ಮೊಣ್ಣಂಡ ಅವರು ಸಾಧನೆ ಗೈದಿದ್ದಾರೆ. ಮೋಟುಲ್ ಸ್ಪಾರ್ಕ್ಸ್ ರೇಸಿಂಗ್ ತಂಡವನ್ನು ಪ್ರತಿನಿಧಿಸಿದ್ದ ತಸ್ಮಯ್, ಯಮಹ ಆರ್ ೧೫ ವಿ.೩ ಮೋಟಾರ್ ಸೈಕಲ್‌ನಲ್ಲಿ ರೇಸಿಂಗ್‌ನಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ ೧೦ ರೇಸ್‌ಗಳಲ್ಲಿ ೨ ರಲ್ಲಿ ಪ್ರಥಮ, ೬ ರಲ್ಲಿ ದ್ವಿತೀಯ ಹಾಗೂ ೧ ರಲ್ಲಿ ೩ನೆ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ರಾಷ್ಟಿçÃಯ ವೈಸ್ ಚಾಂಪಿಯನ್ ೨೦೨೪ ಬಿರುದನ್ನು ತಸ್ಮಯ್ ಪಡೆದಿದ್ದಾರೆ. ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ನಳಿನಿ ಎಮ್.ಎಸ್ ಅವರ ಪುತ್ರ.