ಸಂಪಾಜೆ, ಅ. ೧೯: ಬೆಂಗಳೂರಿನ ಸೂರ್ಯ ಫೌಂಡೇಶನ್ ಸ್ಪಾರ್ಕ್ ಅಕಾಡೆಮಿ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಸಹಯೋಗದಲ್ಲಿ ಬೆಂಗಳೂರಿನ ಇಂಡೋಗ್ಲೋಬ್ ಸಂಸ್ಥೆಯಲ್ಲಿ ನಡೆದ ೨೦೨೪ರ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಶಿಕ್ಷಣ ಪ್ರಕಾಶ ರಾಜ್ಯ ಪ್ರಶಸ್ತಿಯನ್ನು ಊರುಬೈಲು ಚೆಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸೋಮಣ್ಣ ಕೆ.ಆರ್. ಅವರಿಗೆ ಪ್ರದಾನ ಮಾಡಲಾಯಿತು.