ಸುಂಟಿಕೊಪ್ಪ, ಅ. ೨೧: ಕೊಡಗರಹಳ್ಳಿಯ ನಿವಾಸಿ ಮಾಜಿ ಗ್ರಾ.ಪಂ. ಸದಸ್ಯ ನಡಿಕೇರಿಯಂಡ ಡಿ.ಮನು ನಂಜಪ್ಪ ತಮ್ಮ ಪೋಷಕರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದಾರೆ.

ಕುಶಾಲನಗರ ಕೊಡವ ಸಮಾಜದಲ್ಲಿ ರೂ.೨೫,೦೦೦ ದತ್ತಿನಿಧಿಯನ್ನು ತಾವು ಮತ್ತು ಸಹೋದರಿಯರು ಸ್ಥಾಪಿಸಿದ್ದು, ಇದು ಕುಶಾಲನಗರ ಕೊಡವ ಸಮಾಜದ ಶೈಕ್ಷಣಿಕ ನಿಧಿಯಲ್ಲಿಟ್ಟು ವಾರ್ಷಿಕವಾಗಿ ಬರುವ ಬಡ್ಡಿ ಹಣದಲ್ಲಿ ಸರಕಾರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಮೊದಲ ಮತ್ತು ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ನೀಡಲು ನಿರ್ಧರಿಸಲಾಗಿದೆ ಎಂದು ಮನು ನಂಜಪ್ಪ ತಿಳಿಸಿದ್ದಾರೆ.